Advertisement

ಆನೆಗುಡ್ಡೆ ದೇವಸ್ಥಾನ: ಕಾರ್ತಿಕ ದೀಪೋತ್ಸವ

01:45 AM Nov 28, 2018 | Team Udayavani |

ತೆಕ್ಕಟ್ಟೆ: ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾರ್ತಿಕ ಸಂಕಷ್ಟಹರ ಚತುರ್ಥಿಯ ಪ್ರಯುಕ್ತ ಪೂರ್ವಾಹ್ನ ಸಹಸ್ರ ನಾಳಿಕೇರ ಗಣಯಾಗ ಹಾಗೂ ಶ್ರೀ ದೇವರಿಗೆ ವಿಶೇಷ ಪೂಜೆ, ವೈಭವದ ರಜತ ರಥೋತ್ಸವ ಸಹಿತ ದೀಪೋತ್ಸವ ನ. 26ರಂದು ಸಂಭ್ರಮದಿಂದ ಜರಗಿತು.

Advertisement


ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಾರ್ಕಳದ ಹಂಡೆ ಪ್ರತಿಷ್ಠಾನದ ರುಕ್ಮಿಣಿ ಹಂಡೆ ಅವರಿಂದ ಹರಿಕಥೆ, ಕೃಷ್ಣಲೀಲೆ ಹಾಗೂ ಸುಡುಮದ್ದು ಪ್ರದರ್ಶನಗೊಂಡಿತು. ಹಾಗೂ ರಾತ್ರಿ ಕಮಲಶಿಲೆ ಮೇಳದವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ. ಸೂರ್ಯನಾರಾಯಣ ಉಪಾಧ್ಯಾಯ, ದೇಗುಲದ ಮ್ಯಾನೇಜರ್‌ ಆನಂದರಾಮ ಉರಾಳ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next