Advertisement

ಮಟ್ಟುಗುಳ್ಳ ಬೆಳೆಗಾರರಿಗೆ ಪರಿಹಾರ ಧನ ವಿತರಿಸಿದ ಶಾಸಕ ಲಾಲಾಜಿ ಆರ್ ಮೆಂಡನ್

08:41 PM Oct 05, 2021 | Team Udayavani |

ಕಟಪಾಡಿ : 2020ರಲ್ಲಿ  ಸುರಿದ ಭಾರಿ ಮಳೆಯಿಂದಾಗಿ ಕಾಪು  ತಾಲೂಕಿನ ಮಟ್ಟು ಗ್ರಾಮದ ವಿಶೇಷ ಬೆಳೆಯಾದ ಮಟ್ಟುಗುಳ್ಳ  ಕೃಷಿಯು ಅಪಾರ ಪ್ರಮಾಣದಲ್ಲಿ ನಾಶಗೊಂಡಿದ್ದು ಆ .5 ರಂದು  ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಕೋಟೆ ಪಂಚಾಯತ್  ಸಮಾಜ ಮಂದಿರದ ಸಭಾ ಭವನದಲ್ಲಿ  ಒಟ್ಟು 55 ಫಲಾನುಭವಿಗಳಿಗೆ 1 ಲಕ್ಷ ಕ್ಕೂ ಅಧಿಕ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿದರು.

Advertisement

ಇದನ್ನೂ ಓದಿ:ಪಿಲಿಕುಳದ ಹನುಮಾನ್‌ ಲಂಗೂರ್‌ “ರಾಜು’ ಸಾವು

ಈ ಸಂದರ್ಭದಲ್ಲಿ ಕಾಪು ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಂದಾಯ ನಿರೀಕ್ಷಕರಾದ ಸುಧೀರ್ ಕುಮಾರ್ ಶೆಟ್ಟಿ, ಕೋಟೆ ಪಂಚಾಯತ್ ಅಧ್ಯಕ್ಷರು ಕಿಶೋರ್ ಅಂಬಾಢಿ, ಅಭಿವೃದ್ಧಿ ಅಧಿಕಾರಿ ಶ್ರುತಿ ಕಾಂಚನ್, ಗ್ರಾಮ ಲೆಕ್ಕಿಗ ಲೋಕೆನಾಥ ಲಮ್ಹಾನಿ, ಗ್ರಾಮ ಪಂಚಾಯತ್ ಸದಸ್ಯರು,  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next