Advertisement

ಶಂಕರಾಚಾರ್ಯರ ತತ್ವ ಇಂದಿಗೂ ಪ್ರಸ್ತುತ

06:36 PM Apr 29, 2020 | Naveen |

ಕಂಪ್ಲಿ: ಆದಿಗುರು ಅದ್ವೈತ ಸಿದ್ಧಾಂತದ ಶ್ರೀಶಂಕರಾಚಾರ್ಯರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತಹಶೀಲ್ದಾರ್‌ ಎಂ. ರೇಣುಕಾ ಅಭಿಪ್ರಾಯಪಟ್ಟರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಆದಿಗುರು ಶ್ರೀ ಶಂಕರಾಚಾರ್ಯರ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿ, ಶಂಕರಾಚಾರ್ಯರು ನೀಡಿದ ಸಾಮಾಜಿಕ ತತ್ವಗಳು ಸರ್ವರಿಗೂ ಅನ್ವಯವಾಗುವುದಲ್ಲದೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಇರುವಂತಹುಗಳಾಗಿದ್ದು, ಎಲ್ಲರೂ ಅಳವಡಿಸಿಕೊಳ್ಳಬೇಕು. ಕೋವಿಡ್ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರದ ನಿಟ್ಟಿನಲ್ಲಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಶಿರಸ್ತೇದಾರ ಎಸ್‌. ರೇಖಾ ಮಠ, ಪ್ರಥಮ ದರ್ಜೆ ಸಹಾಯಕ ಮಾಲತೇಶ್‌ ದೇಶಪಾಂಡೆ, ವಿಎಗಳಾದ ಬಿ.ಜಿಲಾನ್‌, ಲಕ್ಷ್ಮಣನಾಯ್ಕ, ಶರೀಫ್‌, ಆತೀಫ್‌, ಕುರೇಶಿ, ಭೂಮಾಪನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next