Advertisement

ಬಜ್ಜೋಡಿಯಲ್ಲಿ ಸಂದೇಶ ಪ್ರತಿಷ್ಠಾನದ ಕಲೋತ್ಸವ

11:29 AM Nov 27, 2017 | Team Udayavani |

ಬಜ್ಜೋಡಿ: ಇಲ್ಲಿನ ಸಂದೇಶ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಲೋತ್ಸವ-2017 ಕಾರ್ಯಕ್ರಮ ಸಭಾಂಗಣದಲ್ಲಿ ಜರಗಿದ್ದು, ಮೇಯರ್‌ ಕವಿತಾ ಸನಿಲ್‌ ಉದ್ಘಾಟಿಸಿದರು. ಕಲೋತ್ಸವದಲ್ಲಿ 60 ವಿದ್ಯಾಸಂಸ್ಥೆಗಳ 1,082 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕ್ಲಾಸಿಕಲ್‌ ಡ್ಯಾನ್ಸ್‌, ಡ್ರಾಯಿಂಗ್‌, ಜಾನಪದ ನೃತ್ಯ, ಕೀಬೋರ್ಡ್‌, ವೆಸ್ಟರ್ನ್ ಡ್ಯಾನ್ಸ್‌, ಸಂಗೀತ ಸ್ಪರ್ಧೆಗಳು
ಆಯೋಜನೆಗೊಂಡಿದ್ದವು. 

Advertisement

ವಿಶೇಷ ಶಾಲೆಗಳ ಭಿನ್ನ ಚೇತನ ವಿದ್ಯಾರ್ಥಿಗಳಿಗೂ ವಿವಿಧ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಮಾಜಿ ಮೇಯರ್‌ ಪಿ.ಎಂ.ಕ್ಯಾಸ್ಟಲಿನೊ ಅವರು ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಪಣಂಬೂರು ಮಾನಸ ಸ್ಪೆಶಲ್‌ ಸ್ಕೂಲ್‌ ಹಾಗೂ ಉಡುಪಿ ಜಿಲ್ಲಾ ವಿಶೇಷ ಶಾಲೆ ಸಮಗ್ರ ಪ್ರಶಸ್ತಿ ಪಡೆಯಿತು.

ಸಮಾರೋಪದಲ್ಲಿ ಐಕೇರ್‌ ಗ್ರೂಪ್ಸ್‌ ಆಫ್‌ ಕಂಪೆನೀಸ್‌ನ ಅಶ್ವಿ‌ನ್‌ ಜೊಸ್ಸಿ ಪಿರೇರ, ಎಂಸಿಸಿ ಬ್ಯಾಂಕ್‌ನ ಜನರಲ್‌ ಮ್ಯಾನೇಜರ್‌ ಸುನೀಲ್‌ ಮೆನೇಜಸ್‌ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ| ವಿಕ್ಟರ್‌ ವಿಜಯ್‌ ಲೋಬೋ ಉಪಸ್ಥಿತರಿದ್ದರು.

ಸ್ಪರ್ಧಾ ವಿಭಾಗವಾರು ವಿಜೇತರು
ಹಿರಿಯ ಪ್ರಾಥಮಿಕ ಶಾಲಾ ವಿಭಾಗ: ಬಿಜೈ ಲೂಡ್ಸ್‌ ಸೆಂಟ್ರಲ್‌ ಸ್ಕೂಲ್‌, ಪ್ರೌಢಶಾಲಾ ವಿಭಾಗ: ಕೆನರಾ ಸಿಬಿಎಸ್‌ಇ
ಪ್ರೌಢಶಾಲೆ, ಪಿಯುಸಿ ವಿಭಾಗ: ಸಂತ ಅಲೋಶಿ ಯಸ್‌ ಪ.ಪೂ.ಕಾಲೇಜು ಸಮಗ್ರ ಪ್ರಶಸ್ತಿ ಪಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next