Advertisement

ಸಾವಯವದಲ್ಲೂ ಕಲ್ಲಂಗಡಿ ಬೆಳೆದ ರೈತ

03:56 PM May 21, 2020 | Naveen |

ಕಲಬುರಗಿ: ಕಲ್ಲಂಗಡಿ ಕೇವಲ ರಾಸಾಯನಿಕವಾಗಿ ಬೆಳೆಯಲು ಸಾಧ್ಯ ಎಂಬುದನ್ನು ಅಲ್ಲಗಳೆದ ರೈತನೊಬ್ಬ, ಗೋಮೂತ್ರ ಹಾಗೂ ಜೀವಾಮೃತ ಬಳಸಿ ಉತ್ತಮ ಫಸಲು ಪಡೆಯಬಹುದು ಎಂಬುದನ್ನು ಸಾಬೀತು ಪಡೆಸಿದ್ದಾನೆ.

Advertisement

ನಾಲ್ಕು ದಿನಕ್ಕೊಮ್ಮೆ 200 ಲೀಟರ್‌ ನೀರಿಗೆ 20 ಲೀಟರ್‌ ಗೋಮೂತ್ರ ಮಿಶ್ರಣ ಮಾಡಿ ಕಲ್ಲಂಗಡಿ ಬಳ್ಳಿಗೆ ಹಾಕಲಾಗಿದೆ. ಅದೇ ರೀತಿ ಜೀವಾಮೃತ ಸಹ ಬಳಸಿ ಕಲ್ಲಂಗಡಿ ಬೆಳೆಯಲಾಗಿದೆ. ಅಫ‌ಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಪ್ರಗತಿಪರ ರೈತ ಶರಣಗೌಡ ಎಸ್‌. ಪಾಟೀಲ್‌ ಅವರೇ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ಒಂದೂವರೆ ಎಕರೆ ಭೂಮಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಬರೀ ತಿಪ್ಪೆ ಗೊಬ್ಬರ ಬಳಸಲಾಗಿದೆ. ಕಲ್ಲಂಗಡಿ ಹಣ್ಣು ದಪ್ಪವಾಗಲು ಔಷಧಿ ಸಿಂಪಡಿಸಿಲ್ಲ. ಜತೆಗೆ ಹಣ್ಣು ಕೆಂಪಾಗಿಸಲು ಸಹ ಯಾವುದೇ ಔಷಧ ಬಳಸಿಲ್ಲ. ಬರೀ ಗೋಮೂತ್ರ ಹಾಗೂ ಜೀವಾಮೃತದೊಂದಿಗೆ ರುಚಿಯಾದ ಕಲ್ಲಂಗಡಿ ಬೆಳೆಯಲಾಗಿದೆ. ರೈತ ಶರಣಗೌಡ ಸಾವಯವವಾಗಿ ಬೆಳೆಯಲಾದ ಕಲ್ಲಂಗಡಿಯನ್ನು ವ್ಯಾಪಾರಸ್ಥರಿಗೆ (ದಲ್ಲಾಳಿಗಳು) ಒಟ್ಟಿಗೆ ಮಾರಾಟ ಮಾಡದೇ ರೈತರು ಹಾಗೂ ಸ್ನೇಹಿತರು ಮತ್ತು ಇತರರು ತಿನ್ನಲಿ ಎಂದು ಮುಕ್ತವಾಗಿ ಆಹ್ವಾನ ನೀಡುತ್ತಿದ್ದಾರೆ. ಜತೆಗೆ ಸಾವಯವಾಗಿ ಕಲ್ಲಂಗಡಿ ಬೆಳೆಯುವುದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಸಮಗ್ರ ಕೃಷಿಯೇ ಸಾವಯವ: ತೊಗರಿ-ಜೋಳ ಸೇರಿದಂತೆ ಇತರೆ ಬೆಳೆಗಳನ್ನು ರಾಸಾಯನಿಕ ಬಳಸದೇ, ಕೀಟನಾಶಕ ಸಿಂಪಡಿಸದೇ ಬೆಳೆಯುತ್ತಿದ್ದಾರೆ. ಕೆಲ ರೈತರು ಸಹ ಇದನ್ನು ಅನುರಿಸುತ್ತಿದ್ದಾರೆ. ಒಟ್ಟಾರೆ ಖರ್ಚು ಕಡಿಮೆ ಜತೆಗೆ ಸಾವಯವವಾಗಿ ಬೆಳೆಯುವ ಸಮಗ್ರ ಕೃಷಿ ಪದ್ಧತಿ ಮಾದರಿಯಾಗಿದೆ. ಇದನ್ನು ಇತರ ರೈತರು ಅನುಕರಿಸಿದರೆ ಕಡಿಮೆ ಖರ್ಚಿನ ಜತೆಗೆ ಆರೋಗ್ಯಕ್ಕೆ ಉತ್ತಮವಾದ ಕೃಷಿ ಉತ್ಪನ್ನಗಳನ್ನು ಬೆಳೆಯಬಹುದಾಗಿದೆ. ಆಸಕ್ತ ರೈತರು ಶರಣಗೌಡ ಪಾಟೀಲ್‌ ಅವರನ್ನು ಮೊ. 9483364333 ಸಂಪರ್ಕಿಸಬಹುದು.

ಕೃಷಿಯಲ್ಲಿಂದು ಸಾರಾಯನಿಕ ಗೊಬ್ಬರ ಹಾಗೂ ಇತರೆ ಕ್ರಿಮಿನಾಶಕಗಳ ಬಳಕೆ ಮೀತಿ ಮೀರುತ್ತಿದೆ. ಎಲ್ಲದಕ್ಕೂ ಔಷಧ ಸಿಂಪಡಿಸುವ ಪರಿಸ್ಥಿತಿ ನಿರ್ಮಾಣವನ್ನು ನಾವು ಮಾಡಿಕೊಂಡಿದ್ದೇವೆ. ವ್ಯಾಪಾರ ದೃಷ್ಟಿಗಿಂತ ಆರೋಗ್ಯದ ಕಡೆ ಒಲವು ತೋರುವುದು ಅಗತ್ಯವಾಗಿದೆ. ನಾವು ಮತ್ತೆ ಶೂನ್ಯ ಬಂಡವಾಳ ಕೃಷಿಯತ್ತ ಹೆಜ್ಜೆ ಹಾಕುವುದೇ ಅನಿವಾರ್ಯವಾಗುತ್ತದೆ.
ಶರಣಗೌಡ ಪಾಟೀಲ್‌,
ಪ್ರಗತಿಪರ ರೈತ

Advertisement

Udayavani is now on Telegram. Click here to join our channel and stay updated with the latest news.

Next