Advertisement

ಜೂ.6 “ಸಲಗ’ಕ್ಕೆ ಮುಹೂರ್ತ

09:05 AM Jun 06, 2019 | Lakshmi GovindaRaj |

ದುನಿಯಾ ವಿಜಯ್‌ ನಟಿಸಿ, ನಿರ್ದೇಶನ ಮಾಡಲಿರುವ “ಸಲಗ’ ಚಿತ್ರದ ಮುಹೂರ್ತಕ್ಕೆ ತಯಾರಿ ಜೋರಾಗಿದೆ. ಇಷ್ಟು ದಿನ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಈಗ ಚಿತ್ರದ ಮುಹೂರ್ತದ ಕೆಲಸಗಳಲ್ಲಿ ನಿರತವಾಗಿದೆ. ಹೌದು, ಜೂನ್‌ 6ರಂದು “ಸಲಗ’ ಚಿತ್ರದ ಮುಹೂರ್ತ ನೆರವೇರಲಿದೆ.

Advertisement

ಬಂಡಿ ಮಹಾಕಾಳಮ್ಮ ದೇವಾಲಯದಲ್ಲಿ ಮುಹೂರ್ತ ನಡೆಯಲಿದ್ದು, ನಿರ್ಮಾಪಕ ಕೆ.ಪಿ ಶ್ರೀಕಾಂತ್‌ ಸದ್ಯ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಿರ್ಮಾಪಕ ಕೆ.ಪಿ ಶ್ರೀಕಾಂತ್‌ ಮತ್ತು ತಂಡ ನಟ ಕಿಚ್ಚ ಸುದೀಪ್‌ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ “ಸಲಗ’ ಚಿತ್ರದ ಮೂಹೂರ್ತಕ್ಕೆ ಅತಿಥಿಯಾಗಿ ಬರಲು ಆಹ್ವಾನಿಸಿದ್ದಾರೆ.

ಇನ್ನು ಸುದೀಪ್‌ ಮತ್ತು ಸಿದ್ಧರಾಮಯ್ಯ ಇಬ್ಬರೂ ಮುಹೂರ್ತಕ್ಕೆ ಬರಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಇನ್ನು ದುನಿಯಾ ವಿಜಿ ಕೂಡ “ಸಲಗ’ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಹ್ವಾನಿಸುವ ಉದ್ದೇಶದಿಂದ ಶಿವರಾಜ್‌ ಕುಮಾರ್‌, ಪುನೀತ್‌ ರಾಜಕುಮಾರ್‌ ಸೇರಿದಂತೆ ಹಲವು ಸ್ಟಾರ್‌ಗಳನ್ನ ಈಗಾಗಲೇ ಭೇಟಿ ಮಾಡಿದ್ದಾರೆ.

ಚಿತ್ರರಂಗದ ಜೊತೆಗೆ ಹಲವು ರಾಜಕೀಯ ನಾಯಕರು, ಗೆಳೆಯರಿಗೆ ಆಹ್ವಾನ ನೀಡಿದ್ದಾರೆ. ಇಷ್ಟು ದಿನ ತೆರೆಮೇಲೆ ಅಬ್ಬರಿಸಿದ್ದ ದುನಿಯಾ ವಿಜಯ್‌, ಈಗ ಇದೇ ಮೊದಲ ಬಾರಿಗೆ ಆಕ್ಷನ್‌-ಕಟ್‌ ಹೇಳಲು ತಯಾರಾಗಿದ್ದು, ಈ ವಿಶೇಷ ಚಿತ್ರಕ್ಕೆ ಸ್ಯಾಂಡಲ್‌ವುಡ್‌ ಬಳಗವನ್ನೇ ಸಾಕ್ಷಿಯನ್ನಾಗಿಸುವ ಪ್ರಯತ್ನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next