Advertisement

ಉದ್ಯೋಗ ಸೃಷ್ಟಿ ಯೋಜನೆ : 20 ಎಕ್ರೆ ಸರಕಾರಿ ಜಾಗ ಗುರುತಿಸಲು ಸೂಚನೆ

08:57 PM Mar 08, 2020 | Sriram |

ಕಾರ್ಕಳ: ಕಾರ್ಕಳದಲ್ಲಿ ಜವಳಿ ಪಾರ್ಕ್‌ ನಿರ್ಮಾಣವಾಗಲಿರುವ ಹಿನ್ನೆಲೆಯಲ್ಲಿ ಮಾ. 8ರಂದು ಶಾಸಕ ವಿ. ಸುನಿಲ್‌ ಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ಕಂದಾಯ, ಕೈಗಾರಿಕಾ ಹಾಗೂ ಅರಣ್ಯಾಧಿಕಾರಿಗಳ ಸಭೆ ನಡೆಯಿತು.

Advertisement

ಜವಳಿ ಪಾರ್ಕ್‌ ನಿರ್ಮಾಣಕ್ಕೆ ಸೂಕ್ತವಾಗಿರುವ ಸರಕಾರಿ ಜಾಗ ಎಲ್ಲೆಲ್ಲಿದೆ ಎಂಬ ಮಾಹಿತಿ ಪಡೆದ ಡಿಸಿ ಹಾಗೂ ಶಾಸಕರು, ಸರಕಾರಿ ಜಾಗದ ಸರ್ವೆ ಕಾರ್ಯ ನಡೆಸಿ, ಡೀಮ್ಡ್ ಅರಣ್ಯವನ್ನು ಬೇರ್ಪಡಿಸಿ ವರದಿ ನೀಡುವಂತೆ ತಿಳಿಸಿದರು. ಮಿಯ್ನಾರು, ಸಾಣೂರು, ಬೆಳ್ಮಣ್‌, ಬೈಲೂರು ಪ್ರದೇಶದಲ್ಲಿ 20 ಎಕ್ರೆ ಸರಕಾರಿ ಜಾಗ ಲಭ್ಯತೆ, ಕಾರ್ಮಿಕರು ದೊರೆಯಬಹು ದಾದ ಸ್ಥಳ ಗುರುಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಎಡಿಸಿ ಸದಾಶಿವ ಪ್ರಭು, ಕುಂದಾಪುರ ಉಪವಿಭಾಗ ಎಸಿ ಕೆ. ರಾಜು, ತಹಶೀಲ್ದಾರ್‌ ಪುರಂದರ ಹೆಗ್ಡೆ, ತಾ.ಪಂ. ಇಒ ಡಾ| ಮೇ| ಹರ್ಷ ಕೆ.ಬಿ., ಡಿಎಫ್ಒಆಶಿಶ್‌ ರೆಡ್ಡಿ, ಆರ್‌ಎಫ್ಒ ದಿನೇಶ್‌ ಜಿ.ಡಿ., ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್‌.ಸೇರಿದಂತೆ ಕಂದಾಯ, ಅರಣ್ಯ ಇಲಾಖಾಧಿ ಕಾರಿ, ಸಿಬಂದಿ ಉಪಸ್ಥಿತರಿದ್ದರು.

ಉದ್ಯೋಗ ಸೃಷ್ಟಿ
ಯುವಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಜವಳಿ ಪಾರ್ಕ್‌ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಜವುಳಿ ಪಾರ್ಕ್‌ ನಿರ್ಮಾಣದ ಘೋಷಣೆ ಮಾಡಿದ್ದು, ಯೋಜನೆ ಅನುಷ್ಠಾನದ ಕುರಿತು ಕಂದಾಯ, ಕೈಗಾರಿಕಾ, ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ.
– ವಿ. ಸುನಿಲ್‌ ಕುಮಾರ್‌, ಶಾಸಕರು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next