Advertisement

ಅವಕಾಶವಾದಿ JDS ಮತ್ತೆ BJP ಜೊತೆ ಸೇರುತ್ತದೆ : ಸಿಎಂ ಕಿಡಿ 

12:49 PM Mar 26, 2018 | |

ಮೈಸೂರು: ‘ಬಿಜೆಪಿ ಕೋಮುವಾದಿ ಪಕ್ಷ. ಜೆಡಿಎಸ್‌ ಅವಕಾಶವಾದಿ ಪಕ್ಷ , ಬಿಜೆಪಿ ಜೊತೆ ಕೈಜೋಡಿಸಿದ ಅದು ಜಾತ್ಯಾತೀತ ಪಕ್ಷವಾಗಿ ಉಳಿದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

Advertisement

ಜನಾಶೀರ್ವಾದ ಯಾತ್ರೆಯ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತರಿಗೆ ತಮ್ಮ ನಿವಾಸದ ಬಳಿ ಧನ್ಯವಾದ ಸಲ್ಲಿಸಿದರು. ಇದೇ ವೇಳೆ ನೂರಾರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ ‘ಜೆಡಿಎಸ್‌ ಹಿಂದೆ ಬಿಜೆಪಿ ಜೊತೆ 20 ತಿಂಗಳು ಸರ್ಕಾರ ರಚಿಸಿ ಕೈ ಕೊಟ್ಟಿತ್ತು. ಜೆಡಿಎಸ್‌ ಅವಕಾಶವಾದಿ ಪಕ್ಷ, ದೇವೇಗೌಡರು ಹೇಳಿದ್ದು ನೆನಪಿಲ್ಲವೆ , ಬಿಜೆಪಿ ಜೊತೆ ಸರ್ಕಾರ ರಚಿಸುವುದಾದರೆ ನನ್ನ ಹೆಣದ ಮೇಲೆ ರಚಿಸಬೇಕು ಎಂದಿದ್ದರು. ಆ ಬಳಿಕ ಬಿಜೆಪಿ ಜೊತೆ ಸರ್ಕಾರ ರಚಿಸುವ ಮೂಲಕ ಕುಮಾರಸ್ವಾಮಿ ಪಕ್ಷ ಉಳಿಸಿದ್ದಾರೆ ಅಂತಾನೂ ಹೇಳಿದ್ದಾರೆ. ಮುಂದೆ ಸಹ ಬಿಜೆಪಿ ಜೊತೆ ಜೆಡಿಎಸ್‌ ಕೈಜೋಡಿಸುತ್ತದೆ’ ಎಂದರು.

ಚುನಾವಣೆ ದಿನಾಂಕ ಘೋಷಣೆಗೆ ಎದುರು ನೋಡುತ್ತಿರುವ ವೇಳೆ ಎಚ್‌ಡಿಡಿ, ಎಚ್‌ಡಿಕೆ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ತೀವ್ರಗೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next