Advertisement

Jayaprakash Hegde ಅವಧಿ ಮತ್ತೆ ವಿಸ್ತರಣೆ: ಇಂದು ಆದೇಶ ಸಾಧ್ಯತೆ

12:44 AM Jan 30, 2024 | Team Udayavani |

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅವಧಿ ನಿರೀಕ್ಷೆಯಂತೆ ಮತ್ತೆ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಿದೆ. ಹಾಗೊಂದು ವೇಳೆ ಈ ಸಂಬಂಧ ಅದೇಶ ಹೊರಡಿಸಿದರೆ, ಸತತ ಎರಡನೇ ಬಾರಿಗೆ ವಿಸ್ತರಣೆ ಆದಂತಾಗಲಿದೆ. ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರ ಅವಧಿಯು ಇನ್ನೆರಡು ದಿನಗಳಲ್ಲಿ ಅಂದರೆ, ಜ.31ಕ್ಕೆ ಪೂರ್ಣಗೊಳ್ಳಲಿದೆ.

Advertisement

ಈ ಅವಧಿಯಲ್ಲಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿ ಸಲ್ಲಿಸುವುದು ಅನುಮಾನವಾಗಿದ್ದು, ಫೆಬ್ರವರಿ ಅಂತ್ಯದವರೆಗೆ ಅವಧಿ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಯೋಗದ ಕಚೇರಿ ಮೂಲಗಳ ಪ್ರಕಾರ ಫೆ.15ರವರೆಗೆ ಅವಧಿ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಮಂಗಳವಾರ ಆದೇಶ ಹೊರಬೀಳುವ ನಿರೀಕ್ಷೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next