Advertisement

Jawahar V/s Shivshakti:ಚಂದ್ರಯಾನ ಲ್ಯಾಂಡಿಂಗ್‌ ಸ್ಥಳದ ನಾಮಕರಣ-BJP, ಕಾಂಗ್ರೆಸ್‌ ಜಟಾಪಟಿ

01:11 PM Aug 26, 2023 | Team Udayavani |

ನವದೆಹಲಿ: ಚಂದ್ರಯಾನ 3ರ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಆ.26) ನಾಮಕರಣ ಮಾಡಿದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ “ಕಾಂಗ್ರೆಸ್‌ ನ ಕುಟುಂಬ ಮೊದಲು” ಎಂಬ ಧೋರಣೆ ಬಗ್ಗೆ ವಾಗ್ದಾಳಿ ನಡೆಸಿದೆ.

Advertisement

ಇದನ್ನೂ ಓದಿ:Wild Animal: ಹೃದಯ ಭಾಗಕ್ಕೆ ತಿವಿದ ಕಾಡುಕೋಣ… ವೃದ್ಧನ ಸ್ಥಿತಿ ಗಂಭೀರ

ಚಂದ್ರಯಾನ-2 ಇಳಿದ ಸ್ಥಳವನ್ನು ತಿರಂಗಾ ಎಂದು, ಚಂದ್ರಯಾನ-3ರ ಲ್ಯಾಂಡರ್‌ ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಪ್ರಧಾನಿ ಮೋದಿ ನಾಮಕರಣ ಮಾಡಿದ್ದಾರೆ. ಚಂದ್ರಯಾನ -3ರ ಲ್ಯಾಂಡರ್‌ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದ ಆಗಸ್ಟ್‌ 23 ಅನ್ನು ನ್ಯಾಷನಲ್‌ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವುದಾಗಿ ಪ್ರಧಾನಿ ಘೋಷಿಸಿದ್ದರು.

ಬಿಜೆಪಿ ವಕ್ತಾರ ಶೆಷಝಾದ್‌ ಪೂನಾವಾಲಾ ಟ್ವೀಟ್‌ ನಲ್ಲಿ, ಭಾರತ ಮೊದಲು v/s ಕುಟುಂಬ ಮೊದಲು ಇದರ ಪರಿಣಾಮ ಏನೆಂದರೆ ಚಂದ್ರಯಾನ 1 ಇಳಿದ ಸ್ಥಳವನ್ನು ಜವಾಹರ್‌ ಪಾಯಿಂಟ್‌ ಎಂದು ನಾಮಕರಣ ಮಾಡಲಾಗಿತ್ತು. ಚಂದ್ರಯಾನ 2 ಇಳಿದ ಸ್ಥಳ ತಿರಂಗಾ ಪಾಯಿಂಟ್‌, ಚಂದ್ರಯಾನ-3 ಇಳಿದ ಸ್ಥಳ ಶಿವಶಕ್ತಿ ಪಾಯಿಂಟ್‌ ಎಂದು ನಾಮಕರಣ ಮಾಡಲಾಗಿದೆ. ವಿಕ್ರಮ್‌ ಲ್ಯಾಂಡರ್‌ ಅನ್ನು ವಿಕ್ರಮ್‌ ಸಾರಾಬಾಯಿ ಎಂದು ಕರೆಯಲಾಗಿದೆ. ಯುಪಿಎ ಅಧಿಕಾರದಲ್ಲಿ ಇದ್ದಿದ್ದರೆ ಚಂದ್ರಯಾನ-2 ಮತ್ತು ಚಂದ್ರಯಾನ 3 ಯಾವತ್ತೂ ನೆರವೇರುತ್ತಿರಲಿಲ್ಲ. ಒಂದು ವೇಳೆ ಅವರು ಕಳುಹಿಸಿದ್ದರೂ ಕೂಡಾ ಅದಕ್ಕೆ ಇಂದಿರಾ ಪಾಯಿಂಟ್‌ ಮತ್ತು ರಾಜೀವ್‌ ಪಾಯಿಂಟ್‌ ಎಂದು ಹೆಸರಿಡುತ್ತಿತ್ತು ಎಂದು ಉಲ್ಲೇಖಿಸಿದ್ದಾರೆ.

Advertisement

ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, 2008ರಲ್ಲಿ ಚಂದ್ರಯಾನ 1 ಇಳಿದ ಸ್ಥಳವನ್ನು ಜವಾಹರ್‌ ಪಾಯಿಂಟ್‌ ಎಂದು ನಾಮಕರಣ ಮಾಡಲಾಗಿದೆ. ಚಂದ್ರಯಾನ 3 ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ ಎಂದು ಇಡಲಾಗಿದೆ. ಇದು ವಂಶರಾಜಕಾರಣ ಮತ್ತು ರಾಷ್ಟ್ರೀಯವಾದಿಗಳ ನಡುವಿನ ವ್ಯತ್ಯಾಸವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಾಹ್ಯಾಕಾಶ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿರುವುದಾಗಿ ಬಿಜೆಪಿ ತಿಳಿಸಿದೆ. ಏತನ್ಮಧ್ಯೆ ಕಾಂಗ್ರೆಸ್‌ ಕೂಡಾ 1962ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಇಸ್ರೋ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಿರುವುದಾಗಿ ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next