Advertisement

ಅಮಿತ್ ಶಾ ಭೇಟಿ ಮಾಡಿದ ಜಗದೀಶ್ ಶೆಟ್ಟರ್: ಖಾತೆ ಉಳಿಸುವ ಯತ್ನ?

03:59 PM Apr 07, 2022 | Team Udayavani |

ಬೆಂಗಳೂರು : ಸಂಪುಟ ವಿಸ್ತರಣೆ ಸಂಬಂಧ ದಿಲ್ಲಿಗೆ ತೆರಳಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರಿಗೆ ವಾಪಾಸ್ ಆದ ಬೆನ್ನಲ್ಲೇ ದಿಲ್ಲಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು,ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

Advertisement

ಕಳೆದ ಮೂರ್ನಾಲ್ಕು ದಿನಗಳಿಂದ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದ ಶೆಟ್ಟರ್ ಗೆ ಇಂದು ಅಮಿತ್ ಶಾ ಭೇಟಿಗೆ ಅವಕಾಶ ಕಲ್ಪಿದ್ದಾರೆ. ಸಿಎಂ ಬೊಮ್ಮಾಯಿಗೆ ಸಿಗದ ಅವಕಾಶ ಶೆಟ್ಟರ್ ಗೆ ಲಭಿಸಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಯಿಂದ ರಾಜ್ಯ ರಾಜಕಾರಣದಲ್ಲಿ ಇನ್ನೂ “ಸೀಕ್ರೆಟ್” ಉಳಿದುಕೊಂಡಿದೆ ಎಂಬ ಅನುಮಾನ ಕಾಡಲಾರಂಭಿಸಿದೆ. ಸಿಎಂ ದಿಲ್ಲಿ ಭೇಟಿಗೂ ಮುನ್ನ ಶೆಟ್ಟರ್ ದಿಲ್ಲಿಗೆ ತೆರಳಿದ್ದರೆಂಬುದು ಇನ್ನೊಂದು ವಿಶೇಷ.

ಖಾತೆ ಉಳಿಸುವ ಯತ್ನ ?
ಬಿಜೆಪಿ ಮೂಲಗಳ ಪ್ರಕಾರ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅವರ ಸ್ಥಾನ ಉಳಿಸುವುದಕ್ಕೆ ಶೆಟ್ಟರ್ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next