Advertisement

ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಗೆ ಮೀಸಲಾತಿ ಇಲ್ಲವೇ?

12:20 AM Feb 12, 2022 | Team Udayavani |

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇತರ ಹಿಂದುಳಿದ ವರ್ಗ(ಒಬಿಸಿ)ದವರಿಗೆ ಶೇ.27ರಷ್ಟು ಮೀಸಲಾತಿ ಕೊಡಬೇಕೇ ಅಥವಾ ಬೇಡವೇ? ಈ ಸಂಬಂಧ ದೊಡ್ಡದೊಂದು ಕಾನೂನಿನ ತೊಡಕುಂಟಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಯವರಿಗೆ ಶೇ.27 ಮೀಸಲಾತಿ ಬೇಡ; ಕೊಡಬೇಕು ಎಂದಾದರೆ, ಸಮಿತಿಯೊಂದನ್ನು ರಚಿಸಿ, ಅಧ್ಯಯನ ನಡೆಸಿ ಕೊಡಿ ಎಂದೂ ಹೇಳಿದೆ. ಸುಪ್ರೀಂ ಕೋರ್ಟ್‌ನ ಇದೇ ತೀರ್ಪನ್ನು ಆಧಾರವಾಗಿ ಇರಿಸಿಕೊಂಡು ಕರ್ನಾಟಕದಲ್ಲೂ ಸದ್ಯಕ್ಕೆ ಜಿ.ಪಂ. ಮತ್ತು ತಾ.ಪಂ.ಗಳಿಗೆ ಚುನಾವಣೆ ನಡೆಸುವುದಿಲ್ಲ ಎಂದು ರಾಜ್ಯ ಸರಕಾರ ಹೇಳಿದೆ. ಹಾಗಾದರೆ ಸುಪ್ರೀಂ ಕೋರ್ಟ್‌ ತೀರ್ಪು ಏನಾಗಿತ್ತು? ಇಡೀ ವಿವಾದವೇನು ಎಂಬುದರ ಮೇಲೆ ಒಂದು ನೋಟ ಇಲ್ಲಿದೆ.

Advertisement

ವಿವಾದ ಶುರುವಾಗಿದ್ದು ಯಾವಾಗ?
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ವರ್ಗಕ್ಕೆ ಮೀಸಲಾತಿ ನೀಡುವ ವಿವಾದ ಈಗಿನದ್ದಲ್ಲ. 2010ರಲ್ಲೇ ಈ ಬಗ್ಗೆ ಸುಪ್ರೀಂ ಕೋರ್ಟ್‌

ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಆಗ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ, ಕೆ.ಕೃಷ್ಣಮೂರ್ತಿ ವರ್ಸಸ್‌ ಯೂನಿಯನ್‌ ಆಫ್ ಇಂಡಿಯಾ ಪ್ರಕರಣದಲ್ಲಿ ಮಹತ್ವದ ತೀರ್ಪು ಪ್ರಕಟಿಸಿತ್ತು. ಅಂದರೆ ಸಂವಿಧಾನದ ಪರಿಚ್ಛೇದ 243ಡಿ(6) ಮತ್ತು 243ಟಿ(6) ಪ್ರಕಾರ, ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಕೊಂಚ ಬದಲಾಯಿಸಿ ಶಿಕ್ಷಣ ಸಂಸ್ಥೆಗಳಲ್ಲಿ ನೀಡಲಾಗುವ ಮೀಸಲಾತಿಯಂತೆ ರಾಜಕೀಯವಾಗಿಯೂ ನೀಡಲು ಸಾಧ್ಯವಿಲ್ಲ ಎಂದಿತ್ತು. ಆದರೂ, ಸಂವಿಧಾನದಲ್ಲೇ ಸೂಚಿಸಿರುವ ಬೇರೆ ಪರಿಚ್ಛೇದಗಳಂತೆ ಮೀಸಲಾತಿ ನೀಡಬಹುದು. ಇದು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದಿತ್ತು. ಅಂದರೆ ಮೂರು ಟೆಸ್ಟ್‌ಗಳ ಆಧಾರದ ಮೇಲೆ ಒಬಿಸಿಗಳಿಗೆ ಮೀಸಲಾತಿ ನೀಡಬಹುದು ಎಂದಿದ್ದ ಸುಪ್ರೀಂ ಕೋರ್ಟ್‌ ಅವುಗಳನ್ನು ಹೀಗೆ ಹೇಳಿತ್ತು:

ಚುನಾವಣೆ ಸ್ಥಗಿತ ಮಾಡುವ ಹಾಗಿಲ್ಲ
ಒಬಿಸಿ ಮೀಸಲಾತಿ ಸಂಬಂಧ ಏನೇ ವಿವಾದ ನಡೆದಿದ್ದರೂ ಅವಧಿ ಮೀರಿ ಚುನಾವಣೆ ಮುಂದೂಡುವಂತಿಲ್ಲ ಎಂದು ಸೂಚನೆ ನೀಡಿದೆ. ಟ್ರಿಪಲ್‌ ಟೆಸ್ಟ್‌ ನಡೆಸಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ ರಾಜ್ಯ ಚುನಾವಣ ಆಯೋಗಗಳು ಒಂದಷ್ಟು ಸ್ಥಾನಗಳನ್ನು ಓಪನ್‌ ಕೆಟಗೆರಿಗಳೆಂದು ಗುರುತಿಸಿ ಚುನಾವಣೆ ನಡೆಸಬೇಕು. ಇದೇ ಕಾರಣಕ್ಕಾಗಿ ಚುನಾವಣೆ ನಿಲ್ಲಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಸುಪ್ರೀಂ ಕೋರ್ಟ್‌ ಹೇಳಿದ್ದೇನು?
1.ಪ್ರಾಯೋಗಿಕವಾಗಿ ಅಧ್ಯಯನ ನಡೆಸದೇ ಒಬಿಸಿಗಳಿಗೆ ಮೀಸಲಾತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ.

Advertisement

2.ಆರ್‌ಆರ್‌ ವಾಘ… ವರ್ಸಸ್‌ ಮಹಾರಾಷ್ಟ್ರ ಸರಕಾರ ಪ್ರಕರಣದ ಅನ್ವಯ ನೀಡಲಾಗಿರುವ ತೀರ್ಪು ಇಡೀ ದೇಶಕ್ಕೆ ಅನ್ವಯವಾಗಲಿದೆ. ಅಂದರೆ ಯಾವ ರೀತಿ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಸುಪ್ರೀಂ ಮಾರ್ಗಸೂಚಿ ನೀಡಿದ್ದು, ಇದರ ಅನ್ವಯವೇ ಮೀಸಲಾತಿ ನೀಡಬೇಕಾಗುತ್ತದೆ. ಅಷ್ಟೇ ಅಲ್ಲ, ಎಲ್ಲ ರಾಜ್ಯಗಳೂ ಇದನ್ನೇ ಪಾಲನೆ ಮಾಡಬೇಕಾಗುತ್ತದೆ.

ನಿಯಮಗಳ ದ್ವಂದ್ವ
ವಿಕಾಸ್‌ ಕೃಷ್ಣರಾವ್‌ ಗವಾಲಿ ವರ್ಸಸ್‌ ಮಹಾರಾಷ್ಟ್ರ ರಾಜ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಬೇರೆಯದ್ದೇ ತೀರ್ಪು ನೀಡಿದೆ. ಅಲ್ಲದೆ, 2010ರಲ್ಲಿ ಸಾಂವಿಧಾನಿಕ ಪೀಠ ನೀಡಿದ ತೀರ್ಪನ್ನು ಮಹಾರಾಷ್ಟ್ರ ಸರಕಾರ ಪಾಲನೆ ಮಾಡಿಲ್ಲ ಎಂಬುದು ಗೊತ್ತಾಗಿದೆ. ಈ ಸಂದರ್ಭದಲ್ಲಿ ಕೆಲವೊಂದು ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್‌ ಪ್ರಸ್ತಾವಿಸಿದೆ. ಅಂದರೆ ಸ್ಥಳೀಯ ಸಂಸ್ಥೆಗಳಲ್ಲಿ ನೀಡಲಾಗಿರುವ ಮೀಸಲಾತಿ ಕೇವಲ ಆಯಾ ರಾಜ್ಯ ಸರಕಾರಗಳು ನೀಡಿರುವಂಥದ್ದಾಗಿದೆ. ಇದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. ಆದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಮೀಸಲಾತಿಯಷ್ಟೇ ಸಾಂವಿಧಾನಿಕವಾಗಿದೆ ಎಂದಿದೆ. ಹೀಗಾಗಿಯೇ 2010ರಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿದ್ದ ಯಾವುದೇ ಅಂಶಗಳನ್ನು ಪಾಲನೆ ಮಾಡದೇ ಇರುವುದರಿಂದ ಮಹಾರಾಷ್ಟ್ರ ಚುನಾವಣಾ ಆಯೋಗ ಹೊರಡಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು. ಆದರೂ, ಮಹಾ ಸರಕಾರ ಅಧ್ಯಾದೇಶ ಮೂಲಕ ಚುನಾವಣೆಯನ್ನು ನಡೆಸಿದೆ.  ಇದಾದ ಮೇಲೆ ಬಾಂಬೆ ಹೈಕೋರ್ಟ್‌ನಲ್ಲಿ ಅಧ್ಯಾದೇಶವ‌ನ್ನು ಪ್ರಶ್ನಿಸಲಾಗಿದ್ದು, ಇದಕ್ಕೆ ತಡೆ ನೀಡಲಾಗಿದೆ. ಆದರೆ ಚುನಾವಣ ಪ್ರಕ್ರಿಯೆ ಮಾತ್ರ ನಿಂತಿರಲಿಲ್ಲ. ಹೀಗಾಗಿ ಮೀಸಲಾತಿಯ ಸೀಟ್‌ಗಳ ಪ್ರಕ್ರಿಯೆ ಮಾತ್ರ ಸ್ಥಗಿತವಾಗಿದೆ.  ಮಧ್ಯಪ್ರದೇಶದಲ್ಲೂ ಇದೇ ರೀತಿಯ ವಿವಾದವಾಗಿದ್ದು, ಅಲ್ಲಿಯೂ ಮೀಸಲಾತಿ ಸ್ಥಾನಗಳ ಚುನಾವಣೆಗೆ ಮರು ಅಧಿಸೂಚನೆ ಹೊರಡಿಸುವಂತೆ ಸುಪ್ರೀಂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next