Advertisement

ಅವಧಿಪೂರ್ವ ಉಗ್ರ ತಾಪ ಮುಂಗಾರಿಗೆ ಅಡ್ಡಿ?

02:24 AM Apr 05, 2022 | Team Udayavani |

ಹೊಸದಿಲ್ಲಿ: ಬೇಸಗೆಯಲ್ಲಿ ಉರಿ ಬಿಸಿಲು, ತಾಪಮಾನ ಹೆಚ್ಚಿದ್ದರೆ ಮುಂಗಾರು ಮಳೆ ಚೆನ್ನಾಗಿ ಸುರಿಯುತ್ತದೆ ಎಂಬ ವಾದ ಇದ್ದರೂ ಪ್ರಸ್ತುತ ದೇಶದಲ್ಲಿ ಕಂಡು ಬಂದಿರುವ ತಾಪಮಾನ, ಉಷ್ಣ ಅಲೆಗಳು ಅವಧಿಪೂರ್ವವಾಗಿದ್ದು, ಇದರಿಂದಾಗಿ ಈ ಬಾರಿ ಮುಂಗಾರು ಮಳೆ ಉತ್ತಮವಾಗಿರಲೇ ಬೇಕು ಎಂದೇನಿಲ್ಲ ಎಂದು ಹವಾಮಾನ ತಜ್ಞರು ಪ್ರತಿ ಪಾದಿಸಿದ್ದಾರೆ.

Advertisement

ಈ ಬಾರಿಯ ಮಾರ್ಚ್‌ನಲ್ಲಿ ದಾಖಲಾದ ದೇಶದ ಸರಾಸರಿ ಗರಿಷ್ಠ ತಾಪಮಾನ ಕಳೆದ 122 ವರ್ಷಗಳಲ್ಲಿಯೇ ಅತ್ಯಧಿಕ ಎಂದು ಭಾರತೀಯ ಹವಾಮಾನ ಇಲಾಖೆಯ ತಜ್ಞರು ಈಚೆಗೆ ಹೇಳಿದ್ದರು.

ಇದನ್ನೂ ಓದಿ:ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ಬೋಟ್‌ ಮುಳುಗಡೆ; ಬೋಟ್‌ನಲ್ಲಿದ್ದವರ ರಕ್ಷಣೆ

ಮೇ ಮತ್ತು ಜೂನ್‌ ತಿಂಗಳುಗಳಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಉಷ್ಣ ಅಲೆಗಳು, ತಾಪಮಾನ ಹೆಚ್ಚಿದ್ದರೆ ಅದು ಶಾಂತ ಸಾಗರದ ಮೇಲಿನಿಂದ ನೈಋತ್ಯ ಮಾರುತಗಳ ಆಗಮನವನ್ನು ಉತ್ತೇಜಿಸುತ್ತದೆ. ಇದರಿಂದ ಮುಂಗಾರು ಮಳೆ ಚೆನ್ನಾಗಿ ಸುರಿಯುತ್ತದೆ. ಆದರೆ ಈ ಬಾರಿ ಬಹಳ ಮುಂಚಿತವಾಗಿ ತೀವ್ರ ತಾಪಮಾನ ಕಾಣಿಸಿಕೊಂಡಿದ್ದು, ಮುಂಗಾರು ಮಾರುತಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂದು ಈಗಲೇ ಹೇಳಲಾಗದು ಎಂದು ತಜ್ಞರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next