Advertisement

T20 World Cup Squad: “ಮಧ್ಯಮ ಕ್ರಮಾಂಕಕ್ಕೆ ಹೆಚ್ಚಿನ ಒತ್ತು’: ಅಜಿತ್‌ ಅಗರ್ಕರ್‌

11:02 PM May 02, 2024 | Team Udayavani |

ಮುಂಬಯಿ: ಕಳೆದ ಬಾರಿ ಟಿ20 ವಿಶ್ವಕಪ್‌ ತಂಡದ ಉಪನಾಯಕರಾಗಿದ್ದ ಕೆ.ಎಲ್‌.ರಾಹುಲ್‌ ಈ ಬಾರಿ ತಂಡದಲ್ಲೇ ಇಲ್ಲ. ಇದು ಕ್ರಿಕೆಟ್‌ ವಲಯದಲ್ಲಿ ಭಾರೀ ಚರ್ಚೆಗೀಡಾಗಿದೆ. ಈ ಬಗ್ಗೆ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಬಾಯೆ¤ರೆದಿದ್ದಾರೆ. ನಾವು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಾಗಿ ಎದುರು ನೋಡುತ್ತಿದ್ದೆವು. ಹೀಗಾಗಿ ರಾಹುಲ್‌ ಆಯ್ಕೆಯಾಗಿಲ್ಲ ಎಂದಿದ್ದಾರೆ.

Advertisement

ಟಿ20 ವಿಶ್ವಕಪ್‌ ತಂಡದ ಆಯ್ಕೆಯ ಬಳಿಕ ತಂಡದ ನಾಯಕ ರೋಹಿತ್‌ ಶರ್ಮ ಮತ್ತು ಅಜಿತ್‌ ಅಗರ್ಕರ್‌ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು. ಇಲ್ಲಿ ಮಾತನಾಡಿದ ಅಗರ್ಕರ್‌, “ರಾಹುಲ್‌ ಒಬ್ಬ ಸೊಗಸಾದ ಆಟಗಾರ; ಅದು ನಮಗೆಲ್ಲರಿಗೂ ಗೊತ್ತು. ವಿಷಯ ಏನಂದರೆ, ನಾವು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಲ್ಲ ಆಟಗಾರನಿಗಾಗಿ ಎದುರು ನೋಡುತ್ತಿದ್ದೆವು. ಆದರೆ ರಾಹುಲ್‌ ಐಪಿಎಲ್‌ನಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ ಆಗಿ ಉತ್ತಮವಾಗಿ ಆಡುತ್ತಿದ್ದಾರೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next