Advertisement

Niger: ನಿಜೆರ್‌ ತೊರೆಯಲು ಭಾರತೀಯರಿಗೆ ಸಲಹೆ

10:53 PM Aug 11, 2023 | Team Udayavani |

ನವದೆಹಲಿ: ಆಫ್ರಿಕನ್‌ ರಾಷ್ಟ್ರ ನಿಜೆರ್‌ನಲ್ಲಿ ಉಂಟಾಗಿರುವ ರಾಜಕೀಯ ದಂಗೆಯಿಂದ ಪರಿಸ್ಥಿತಿ ಹದೆಗೆಟ್ಟಿದ್ದು, ನಿಜೆರ್‌ನಲ್ಲಿರುವ ಭಾರತೀಯ ಪ್ರಜೆಗಳು ಸಾಧ್ಯವಾದಷ್ಟು ಬೇಗ ದೇಶ ತೊರೆಯುವಂತೆ ಭಾರತೀಯ ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ.

Advertisement

ಈ ಕುರಿತಂತೆ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂಧಮ್‌ ಬಾಗಿc ಮಾಹಿತಿ ನೀಡಿದ್ದು, ನಿಜೆರ್‌ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ರಾಜಧಾನಿ ನಿಯಾಮಿಗೆ ಹೋಗಲು ಯೋಜಿಸಿರುವ ಭಾರತೀಯರು ಸದ್ಯದ ಮಟ್ಟಿಗೆ ತಮ್ಮ ಯೋಜನೆ ಮುಂದೂಡುವುದು ಉತ್ತಮ. ಅಲ್ಲದೇ, ಸದ್ಯದ ಪರಿಸ್ಥಿತಿಯಲ್ಲಿ ನಿಜೆರ್‌ನಲ್ಲಿ ಇರಲೇಬೇಕೆನ್ನುವ ಪರಿಸ್ಥಿತಿ ಇಲ್ಲದ ಭಾರತೀಯರು ಸ್ವದೇಶಕ್ಕೆ ಮರಳಿ ಎಂದಿದ್ದಾರೆ. ಅಲ್ಲದೇ, ನಿಜೆರ್‌ನಲ್ಲಿರುವ ಭಾರತೀಯರು ರಾಯಭಾರ ಕಚೇರಿಯಲ್ಲಿ ನೋಂದಾಯಿಸಿಕೊಂಡು, ಸಂಪರ್ಕದಲ್ಲಿ ಇರುವಂತೆಯೂ ತುರ್ತು ಸಹಾಯವಾಣಿ ಸಂಪರ್ಕ ಬಳಸಿ ಅಗತ್ಯ ಮಾಹಿತಿ ಸಲಹೆ ಪಡೆಯುವಂತೆಯೂ ಬಾಗಿc ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next