Advertisement

ಗಡಿ ರೇಖೆ ದಾಟಿ ಬಂದ ವ್ಯಕ್ತಿಯನ್ನು ಪಿಒಕೆ ಅಧಿಕಾರಿಗಳಿಗೆ ಹಸ್ತಾಂತರಿಸಿದ ಭಾರತೀಯ ಸೇನೆ

03:30 PM Apr 15, 2021 | Team Udayavani |

ಜಮ್ಮು: ಆಕಸ್ಮಿಕವಾಗಿ ಗಡಿನಿಯಂತ್ರಣ ರೇಖೆ ದಾಟಿ ಭಾರತದೊಳಕ್ಕೆ ಆಗಮಿಸಿದ್ದ ವ್ಯಕ್ತಿಯನ್ನು ಮಾನವೀಯತೆ ಆಧಾರದ ಮೇಲೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ) ವಾಪಸ್ ಕಳುಹಿಸಿರುವುದಾಗಿ ಅಧಿಕಾರಿಗಳು ಗುರುವಾರ(ಏಪ್ರಿಲ್ 15) ತಿಳಿಸಿದ್ದಾರೆ.

Advertisement

ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ರಾವಲ್ ಕೋಟ್- ಮತ್ತು ಪೂಂಚ್ ಗಡಿಭಾಗದಲ್ಲಿ ಗುಲಾಂ ಖಾದಿರ್ ಎಂಬ ವ್ಯಕ್ತಿಯನ್ನು ಭಾರತೀಯ ಸೇನೆ ಪಿಒಕೆ ಅಧಿಕಾರಿಗಳಿಗೆ ಹಸ್ತಾಂತರಿಸಿರುವುದಾಗಿ ವರದಿ ತಿಳಿಸಿದೆ.

ಆಕಸ್ಮಿಕವಾಗಿ ಗಡಿನಿಯಂತ್ರಣ ರೇಖೆ ಭಾರತದೊಳಕ್ಕೆ ಪ್ರವೇಶಿಸಿದ್ದ ಪಾಕ್ ಆಕ್ರಮಿತ ಕಾಶ್ಮೀರದ ಗಿಮ್ ಗ್ರಾಮದ ನಿವಾಸಿ ಗುಲಾಂ ಅವರನ್ನು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು ಎಂದು ತಿಳಿಸಿದ್ದಾರೆ.

ಗುಲಾಂ ಖಾದಿರ್ ಏಪ್ರಿಲ್ 11ರಂದು ಭಾರತದ ಗಡಿಯೊಳಕ್ಕೆ ಪ್ರವೇಶಿಸಿದ್ದರು. ಸೂಕ್ತ ತನಿಖೆಯ ನಂತರ ಮಾನವೀಯತೆ ಆಧಾರದ ಮೇಲೆ ಮತ್ತೆ ಪಿಒಕೆಗೆ ಕಳುಹಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next