Advertisement

‘ಅಧಃಪತನದಲ್ಲಿರುವ ಆರ್ಥಿಕತೆಯನ್ನು ಅಸಮರ್ಥ ವೈದ್ಯರೊಬ್ಬರು ಪರಿಶೀಲಿಸುತ್ತಿದ್ದಾರೆ’: ಚಿದಂಬರಂ

09:57 AM Feb 12, 2020 | Hari Prasad |

ನವದೆಹಲಿ: ‘ದೇಶದ ಆರ್ಥಿಕತೆಯು ಪತನದಂಚಿಗೆ ತಲುಪಿದೆ’ ಎಂದು ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್‌ ನಾಯಕ ಚಿದಂಬರಂ ಹೇಳಿದ್ದಾರೆ. ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವೈಫ‌ಲ್ಯವನ್ನು ಟೀಕಿಸಿರುವ ಚಿದಂಬರಂ, “ಅಧಃಪತನದಲ್ಲಿರುವ ಆರ್ಥಿಕತೆಯನ್ನು ಅಸಮರ್ಥ ವೈದ್ಯರೊಬ್ಬರು ಪರಿಶೀಲಿಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

Advertisement

ಇನ್ನೊಂದೆಡೆ, ದೇಶದಲ್ಲಿ ಆರ್ಥಿಕ ಹಿಂಜರಿತ ಉಂಟಾಗಿಲ್ಲ ಎಂದು ವಾದಿಸಿರುವ ಬಿಜೆಪಿ ಸಂಸದ ವೀರೇಂದ್ರ ಸಿಂಗ್‌ ಮಸ್ತ್, “ದೇಶದ ಜನ ಶರ್ಟು- ಪ್ಯಾಂಟು, ಜಾಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಆರ್ಥಿಕ ಹಿಂಜರಿತ ಆಗಿಲ್ಲ ಎನ್ನುವುದಕ್ಕೆ ಇದುವೇ ಸಾಕ್ಷಿ. ಹಿಂಜರಿತ ಆಗಿದ್ದರೆ, ಜನ ಧೋತಿ-ಕುರ್ತಾ ಧರಿಸುತ್ತಿದ್ದರು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next