Advertisement

ಸಾರಿಗೆ ಸಿಬ್ಬಂದಿಗೆ ರೋಗ ನಿರೋಧಕ ಮಾತ್ರೆ

08:33 AM May 25, 2020 | Suhan S |

ಹುಬ್ಬಳ್ಳಿ: ಕೋವಿಡ್‌-19 ತುರ್ತು ಕರ್ತವ್ಯದಲ್ಲಿ ತೊಡಗಿರುವ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ಸಿಬ್ಬಂದಿಯ ಆರೋಗ್ಯ ರಕ್ಷಣೆ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಆಯುಷ್‌ ಇಲಾಖೆಯಿಂದ ನೀಡಿದ ‘ಆರ್ಸೆನಿಕ್‌ ಅಲ್ಬಂ-30’ ಹೋಮಿಯೋಪಥಿ ಮಾತ್ರೆ ವಿತರಿಸಲಾಯಿತು.

Advertisement

ವಿಭಾಗೀಯ ನಿಯಂತ್ರಣಾಧಿಕಾರಿ ಎಚ್‌. ರಾಮನಗೌಡರ ಮಾತ್ರೆ ವಿತರಿಸಿದ ನಂತರ ಮಾತನಾಡಿ, ವಿಭಾಗದ 2000ಕ್ಕೂ ಹೆಚ್ಚಿನ ಸಿಬ್ಬಂದಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗತ್ಯವಿರುವಷ್ಟು ಹೋಮಿಯೋಪಥಿ ಮಾತ್ರೆಗಳನ್ನು ಜಿಲ್ಲಾ ಆಯುಷ್‌ ಇಲಾಖೆ ಉಚಿತವಾಗಿ ನೀಡಿದ್ದಾರೆ. ಆಯುಷ್‌ ಇಲಾಖೆ ಅಧಿಕಾರಿಗಳು ತಿಳಿಸಿದಂತೆ ಈ ಮಾತ್ರೆಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವೈದ್ಯರು ಸೂಚಿಸಿದಂತೆ ನಿರಂತರವಾಗಿ ಮೂರು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ 6 ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಒಂದು ತಿಂಗಳ ನಂತರ ಪುನಃ 6 ಮಾತ್ರೆಗಳಂತೆ ಮೂರು ದಿನ ತೆಗೆದುಕೊಳ್ಳಬೇಕು ಎಂದರು.

ಉತ್ತಮ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳ ಜತೆಗೆ ಉತ್ತಮ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಸಂಜೆ-ಬೆಳಗ್ಗೆ ವ್ಯಾಯಾಮ, ಯೋಗ, ಪ್ರಾಣಯಾಮ ಚಾಚೂ ತಪ್ಪದೆ ಮಾಡಬೇಕು. ಇನ್ನು ಕರ್ತವ್ಯದ ವೇಳೆಯಲ್ಲಿ ಮಾಸ್ಕ್, ಕೈಗವಸು ಸೇರಿದಂತೆ ಸುರಕ್ಷತಾ ಕ್ರಮ ಅನುಸರಿಸಬೇಕೆಂದು ಹೇಳಿದರು.

ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ, ವಿಭಾಗೀಯ ತಾಂತ್ರಿಕ ಶಿಲ್ಪಿ ಕಿರಣ ಬಸಾಪುರ, ಸಹಾಯಕ ಆಡಳಿತಾಧಿಕಾರಿ ನಾಗಮಣಿ, ಘಟಕ ವ್ಯವಸ್ಥಾಪಕಿ ರೋಹಿಣಿ ಬೇವಿನಕಟ್ಟಿ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next