Advertisement

ಇಲ್ಯಾಸ್‌ ಕೊಲೆ: ಮೂವರ ಬಂಧನ

08:36 AM Feb 23, 2018 | |

ಮಂಗಳೂರು: ಉಳ್ಳಾಲ ಟಾರ್ಗೆಟ್‌ ಗ್ರೂಪ್‌ನ ಇಲ್ಯಾಸ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಉಳ್ಳಾಲ ಧರ್ಮನಗರ ನಿವಾಸಿ ದಾವೂದ್‌ (38) ಸಹಿತ ಮೂವರನ್ನು  ಮಂಗಳೂರು ದಕ್ಷಿಣ ಪೊಲೀಸರು  ಗುರುವಾರ ಬಂಧಿಸಿದ್ದಾರೆ.  

Advertisement

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉದ್ಯಾವರ ನಿವಾಸಿ  ಮಹಮ್ಮದ್‌ ನಾಸಿರ್‌ ಯಾನೆ ನಾಸಿರ್‌ ಯಾನೆ ನಾಚಿ ( 25) ಹಾಗೂ ಮಂಜೇ ಶ್ವರ  ಮಚ್ಚಂಪಾಡಿ ಸಿ.ಎಂ.ನಗರ ನಿವಾಸಿ ರಿಯಾಜ್‌ ಯಾನೆ ರಿಯಾ (32)  ಇನ್ನಿಬ್ಬರು ಆರೋಪಿಗಳು. 

ದಾವೂದ್‌ ಈ  ಕೃತ್ಯದಲ್ಲಿ ನೇರ ಭಾಗಿಯಾಗಿದ್ದ.   ಮಹಮ್ಮದ್‌ ನಾಸಿರ್‌ ಹಾಗೂ ರಿಯಾಜ್‌ ಹಂತಕ ರಿಗೆ  ಆಶ್ರಯ ಹಾಗೂ ಹಣಕಾಸು  ಸಹಾಯ ನೀಡಿದ್ದರು.  ದಾವೂದ್‌ನ ಮೇಲೆ ಇಲ್ಯಾಸ್‌ ಕೊಲೆ ಪ್ರಕರಣ ಸೇರಿ ಒಟ್ಟು ನಾಲ್ಕು ಕೊಲೆ, ಎರಡು ಕೊಲೆ ಯತ್ನ ಹಾಗೂ ಇತರ ಐದು ಪ್ರಕರಣಗಳು ದಾಖಲಾಗಿವೆ. 

ಮಹ ಮ್ಮದ್‌ ನಾಸಿರ್‌  ಮೇಲೆ ಮಂಜೇಶ್ವರ ಠಾಣೆಯಲ್ಲಿ  ಹಲ್ಲೆ ಪ್ರಕರಣ ದಾಖ ಲಾಗಿದೆ.   

ಇಲ್ಯಾಸ್‌ ಪ್ರಕರಣದಲ್ಲಿ ಈಗಾಗಲೇ  ಮಹಮ್ಮದ್‌ ಸಮೀರ್‌ ಅಲಿಯಾಸ್‌  ಸಮೀರ್‌ ಮತ್ತು ನಮೀರ್‌ ಹಂಝ  ಅವರನ್ನು ಬಂಧಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next