Advertisement

ಮಂಜಿನಿಂದ ನೀರು: ತಂತ್ರಜ್ಞಾನ

08:15 AM Oct 09, 2018 | Team Udayavani |

ಹೊಸದಿಲ್ಲಿ: ನೀರಿನ ಕೊರತೆಯನ್ನು ನೀಗಿಸಲು ವಿಶ್ವದ ವಿವಿಧೆಡೆಯ ವಿಜ್ಞಾನಿಗಳು ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇದ್ದಾರೆ. ಈಗ ಹಿಮಾಚಲ ಪ್ರದೇಶದ ಐಐಟಿ ಮಂಡಿ ವಿಜ್ಞಾನಿಗಳ ತಂಡವೂ ಇಂಥದ್ದೊಂದು ವಿಶಿಷ್ಟ ಸಂಶೋಧನೆ ನಡೆಸಿದ್ದು, ಮಂಜಿನಿಂದ ನೀರನ್ನು ಪಡೆಯುವ ವಿಧಾನವನ್ನು ಕಂಡುಕೊಂಡಿದೆ. ಮರುಭೂಮಿ ಮತ್ತು ಅರೆ ಮರುಭೂಮಿ ಪ್ರದೇಶಗಳಲ್ಲಿ ಇರುವ ಹಲವು ಸಸ್ಯಗಳ ಎಲೆಗಳು ಮಂಜಿನಿಂದ ನೀರು ಹೀರುವ ಸಾಮರ್ಥ್ಯ ಹೊಂದಿರುತ್ತವೆ. ಈ ಸಸ್ಯಗಳ ಕಾರ್ಯವಿಧಾನವನ್ನೇ ಅನುಸರಿಸಿ ನೀರನ್ನು ಪಡೆಯುವ ವಿಧವನ್ನು ನಾವು ಅಭಿವೃದ್ಧಿಪಡಿಸಿದ್ದೇವೆ ಎಂದು ಸಹ ಪ್ರಾಧ್ಯಾಪಕ ವೆಂಕಟ ಕೃಷ್ಣನ್‌ ಹೇಳಿದ್ದಾರೆ. ಎಲೆಗಳ ಮಂಜು ಹೀರುವ ಪ್ಯಾಟರ್ನ್ ಅನ್ನು ವಿಜ್ಞಾನಿಗಳು ಪಾಲಿಮರ್‌ ಬಳಸಿ ಅಭಿವೃದ್ಧಿಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next