Advertisement

ಪ್ರಧಾನಿ ಮೋದಿ ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕು : ರಾಜ್‌ ಠಾಕ್ರೆ

04:48 PM Oct 31, 2022 | Team Udayavani |

ಮುಂಬಯಿ: ಬರುವ ಪ್ರತಿಯೊಂದು ಯೋಜನೆಗಳು ಗುಜರಾತ್‌ಗೆ ಹೋಗುತ್ತಿರುವುದು ತುಂಬಾ ಕೆಟ್ಟದಾಗಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳನ್ನು ತಮ್ಮ ಮಕ್ಕಳಂತೆ ಭಾವಿಸಿದ್ದು, ಪ್ರತಿಯೊಂದು ರಾಜ್ಯವನ್ನು ಸಮಾನವಾಗಿ ಕಾಣಬೇಕು ಎಂಬ ಆಶಯವನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್‌ ಠಾಕ್ರೆ ವ್ಯಕ್ತಪಡಿಸಿದ್ದಾರೆ.

Advertisement

ಪ್ರತಿಯೊಂದು ಯೋಜನೆಯೂ ಗುಜರಾತ್‌ಗೆ ಏಕೆ ಹೋಗುತ್ತದೆ ಎಂದು ಪ್ರಶ್ನಿಸಿದ ರಾಜ್‌ ಠಾಕ್ರೆ ಅವರು, ಪ್ರಧಾನಿಯವರು ದೇಶಕ್ಕೆ ಸೇರಿದವರು ಮತ್ತು ಅವರಿಗೆ ಪ್ರತಿಯೊಂದು ರಾಜ್ಯವೂ ಹೇಗೆ ಇರಬೇಕು ಎಂಬ ಅರಿವಿದೆ. ಪ್ರಧಾನಿಯವರು ಮಹಾರಾಷ್ಟ್ರದ ಬಗ್ಗೆ ಗಮನಹರಿಸಬೇಕು.

ಏಕೆಂದರೆ ಎಲ್ಲವೂ ಗುಜರಾತಿಗೆ ಹೋದರೆ ರಾಜ್‌ ಠಾಕ್ರೆ ಮಾತನಾಡುತ್ತಾನೆ ಎಂದು ಹೇಳಿದ್ದಾರೆ.

ಪ್ರಧಾನಿಯವರ ಚಿಂತನೆ ದೊಡ್ಡದಾಗಿರಬೇಕು ಮತ್ತು ಅದು ಇಡೀ ದೇಶಕ್ಕೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಪ್ರತಿಯೊಂದು ರಾಜ್ಯವೂ ದೊಡ್ಡದಾಗಿರಬೇಕು. ಪ್ರತಿಯೊಂದು ರಾಜ್ಯವೂ ಕೈಗಾರಿಕೆಗಳನ್ನು ಹೊಂದಿರಬೇಕು. ಜನರು ತಮ್ಮ ಮನೆಗಳನ್ನು ಬಿಟ್ಟು ಬೇರೆ ರಾಜ್ಯಗಳಿಗೆ ಹೊರೆಯಾಗುವ ಅಗತ್ಯವಿಲ್ಲ. ಉತ್ತಮ ಯೋಜನೆಗಳು ರಾಜ್ಯಗಳಿಗೆ ಬರಬೇಕು. ಆಗ ಇಡೀ ದೇಶವು ಅಭಿವೃದ್ಧಿ ಹೊಂದುತ್ತದೆ ಎಂದು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದರು.

ಇದನ್ನೂ ಓದಿ:ಪ್ರತ್ಯೇಕ ಕಾರ್ಯಾಚರಣೆ : ಕಾಶ್ಮೀರದಲ್ಲಿ ಮೂವರು ಶಂಕಿತ ಉಗ್ರರ ಬಂಧನ

Advertisement

ಇವತ್ತಿಗೂ ಕೈಗಾರಿಕೀಕರಣದಲ್ಲಿ ಮಹಾರಾಷ್ಟ್ರ ಯಾವುದೇ ರಾಜ್ಯಕ್ಕಿಂತ ಮುಂದಿದೆ. ಮಹಾರಾಷ್ಟ್ರ ಕೈಗಾರಿಕೀಕರಣದಲ್ಲಿ ಯಾವತ್ತೂ ಪ್ರಗತಿಪರ ರಾಜ್ಯವಾಗಿದೆ. ಉದ್ಯಮಿಗಳೂ ಮಹಾರಾಷ್ಟ್ರ ತಮ್ಮ ನಂಬರ್‌ ವನ್‌ ರಾಜ್ಯ ಎಂದು ಭಾವಿಸುತ್ತಾರೆ. ಗುಜರಾತ್‌ ಯೋಜನೆಗಳಿಗೆ ಅನುಕೂಲಕರವಾದ ಸೌಲಭ್ಯಗಳನ್ನು ಮಹಾರಾಷ್ಟ್ರ ಹೊಂದಿಲ್ಲ ಎನ್ನುವ ಭಾವನೆ ಇರಕೂಡದು. ಪ್ರತಿಯೊಂದು ರಾಜ್ಯವನ್ನು ದೊಡ್ಡದಾಗಿ ಮಾಡುವುದು ಪ್ರಧಾನ ಮಂತ್ರಿಯ ಜವಾಬ್ದಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next