Advertisement
ಹುಡಾ ಸದಸ್ಯರೊಡಗೂಡಿ ಜಂಟೀ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಶುಕ್ರವಾರ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರು ಹುಡಾ ವಿರುದ್ದ ಆರೋಪಿಸಿರುವಂತೆ ಗ್ರಾ.ಪಂ.ವ್ಯಾಪ್ತಿಯ ಭೂಮಿಯನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿಲ್ಲ, ಎಲ್ಲಿಂದ ಅರ್ಜಿ ಬರುತ್ತದೋ ಅಲ್ಲಿಗೆ ನಿಯಮಾನುಸಾರ ಪ್ರಾಧಿಕಾರದಿಂದ ಕಳುಹಿಸಿಕೊಡಲಾಗುತ್ತಿದೆ. ಆದರೆ ಹಿಂದಿನದನ್ನು ಉದಾಹರಿಸಿ, ಗ್ರಾ.ಪಂ.ಗೆ ಲಕ್ಷಾಂತರ ರೂ ನಷ್ಟವಾಗುವಂತೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ತಾವು ಕಳೆದ ಮಾರ್ಚ್ ನಲ್ಲಿ ಅಧಿಕಾರವಹಿಸಿಕೊಂಡಿದ್ದು. ಯಾವುದೇ ಲೋಪವಿಲ್ಲದೆ ಕಾರ್ಯನಿರ್ವಹಿಸಿದ್ದೇನೆಂದು ಸಮರ್ಥಿಸಿಕೊಂಡು ತಮ್ಮಿಂದ ಅಕ್ರಮ ನಡೆದಿದ್ದಲ್ಲಿ ತಾವು ರಾಜಿನಾಮೆ ನೀಡಲು ಸಿದ್ದ, ಆರೋಪ ಸಾಬೀತುಪಡಿಸಲು ವಿಫಲವಾದಲ್ಲಿ ಶಾಸಕರು ಸಿದ್ದರಿರುವರೇ ಎಂದು ಪ್ರಶ್ನಿಸಿದರು.
Related Articles
Advertisement
ಇದನ್ನೂ ಓದಿ : ಹುಬ್ಬಳ್ಳಿ :ಪತಿ ನಡೆಸುತ್ತಿದ್ದ ಲಾಡ್ಜ್ ನಲ್ಲೇ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಪತ್ನಿ
ಶಾಸಕರು ಹುಡಾಗೆ ಸದಸ್ಯರಲ್ಲ:ಯೋಜನಾ ಪ್ರಾಧಿಕಾರವು ಸ್ವಾಯತ್ತ ಸಂಸ್ಥೆಯಾಗಿದ್ದು. ಶಿಷ್ಟಾಚಾರದ ಪ್ರಕಾರ ಪ್ರಾಧಿಕಾರಕ್ಕೆ ಶಾಸಕರು ಸದಸ್ಯರಲ್ಲ, ಆದರೂ ಶಾಸಕರನ್ನು ತಾವು ನಗರದ ಅಭಿವೃದ್ದಿಗಾಗಿ ಹಾಗೂ ಸಹೋದರರಂತೆ ವಿಶ್ವಾಸಕ್ಕೆ ತೆಗೆದುಕೊಂಡು ನಾನೇ ಖುದ್ದಾಗಿ ಅವರ ಬಳಿ ಚರ್ಚಿಸಿದ್ದೇನೆ. ಅಲ್ಲದೆ ಜ.10ರ ಸೋಮವಾರ ನಡೆಯುವ ಸಭೆಗೂ ಆಹ್ವಾನಿಸಿದ್ದೇನೆ. ಕಚೇರಿ ಸ್ಥಳಾಂತರಿಸುವ ಬಗ್ಗೆ ಶಾಸಕರ ಬಳಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಚರ್ಚಿಸಲು ಹೋದ ವೇಳೆ ಹೇಗೆ ಸ್ಥಳಾಂತರ ಮಾಡುತ್ತೀಯಾ ಎಂದು ಗದರಿಸಿ ಕಳುಹಿಸಿದ್ದಾರೆ. ರಾಜಕೀಯ ಲಾಭಕ್ಕೆ ಆರೋಪ ತರವಲ್ಲ: ಇನ್ನು ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಸುವ ಬದಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ವರ್ತನೆ ಬದಲಾಯಿಸಿಕೊಳ್ಳಬೇಕು. ರಾಜಕೀಯ ಲಾಭಕ್ಕೋಸ್ಕರ ಪ್ರಾಧಿಕಾರದ ವಿರುದ್ದ ಆರೋಪ ಸಲ್ಲದು.ಶಾಸಕರಿಗೆ ಗೌರವ ಕೊಡುತ್ತೇವೆ. ಹೀಗೆ ಮುಂದುವರೆದರೆ ನಮಗೂ ರಾಜಕೀಯ ಮಾಡಲು ಬರುತ್ತದೆ. ಇಂತಹ ದಬ್ಬಾಳಿಕೆಗೆ ಹೆದರುವುದಿಲ್ಲವೆಂದರು. ಸುದ್ದಿಗೋಷ್ಟಿಯಲ್ಲಿ ಪ್ರಾಧಿಕಾರದ ಸದಸ್ಯರಾದ ನಾರಾಯಣ್, ಗೋವಿಂದನಾಯಕ, ರವಿಕುಮಾರ್ ಇದ್ದರು.