Advertisement

ಜೂನ್‌ 21ರಂದು ಚಿತ್ರರಂಗದಿಂದ ಸಿಎಂಗೆ ಸನ್ಮಾನ

03:40 PM Jun 14, 2018 | Team Udayavani |

ಬೆಂಗಳೂರು:ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಜೂನ್‌ 21 ರಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಗುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಅವರು, ಈ ಕುರಿತು
“ಉದಯವಾಣಿಯೊಂದಿಗೆ ಮಾತನಾಡಿ, “ಮಂಡಳಿಯಿಂದ ಸಿಎಂ ಕುಮಾರಸ್ವಾಮಿ ಅವರನ್ನು ಜೂ.21 ರ ಸಂಜೆ ಖಾಸಗಿ ಹೋಟೆಲ್‌ವೊಂದರಲ್ಲಿ ಸನ್ಮಾನಿಸಿ, ಗೌರಿವಿಸಲಾಗುತ್ತಿದೆ. ಅಂದು ಚಿತ್ರರಂಗದ ಬಹುತೇಕ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ವಿತರಕರು, ಪ್ರದರ್ಶಕರು ಆಗಮಿಸುತ್ತಿದ್ದಾರೆ.

Advertisement

ಹಿಂದಿನ ಸರ್ಕಾರ ಚಿತ್ರರಂಗಕ್ಕೆ ಹಲವು ಮನವಿಗಳಿಗೆ ಸ್ಪಂದಿಸಿತ್ತು. ಚಿತ್ರರಂಗದಲ್ಲಿ ಇನ್ನಷ್ಟು ಕೆಲಸಗಳು ನಡೆಯಬೇಕಿರುವುದರಿಂದ ಅಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುತ್ತದೆ. ಅಂದು ನಡೆಯುವ ಕಾರ್ಯಕ್ರಮ ಹೇಗೆಲ್ಲಾ ಇರಬೇಕು, ಯಾರೆಲ್ಲಾ ವೇದಿಕೆಯಲ್ಲಿರಬೇಕು ಎಂಬುದರ ಬಗ್ಗೆ ಈಗಷ್ಟೇ ರೂಪುರೇಷೆ ಸಿದ್ಧಗೊಳ್ಳುತ್ತಿದೆ. ಒಟ್ಟಾರೆ, ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಸಾಕಷ್ಟು ಒಳ್ಳೆಯ ಕೆಲಸಗಳು ನಡೆದಿವೆ.

ಮುಂದಿನ ದಿನಗಳಲ್ಲಿ ಸರ್ಕಾರದಿಂದ ಇನ್ನಷ್ಟು ಒಳ್ಳೆಯ ಕೆಲಸಗಳು ಆಗಬೇಕಿದೆ. ನೂತನ ಮುಖ್ಯಮಂತ್ರಿಗಳನ್ನು ಸನ್ಮಾನಿಸುವ ದಿನದಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗು ಚಿತ್ರರಂಗದ ಗಣ್ಯರು ಹಾಜರಿರಲಿದ್ದಾರೆ’
ಎಂಬುದು ಸಾ.ರಾ.ಗೋವಿಂದು ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next