Advertisement

ಕಿಟಕಿ ಮೂಲಕ ಚಿಲಕ ತೆಗೆದು ಮನೆಗಳವು

11:29 AM Aug 11, 2018 | |

ಬೆಂಗಳೂರು: ಕಿಟಕಿ ಮೂಲಕ ಕೈ ಹಾಕಿ ಚೀಲಕ ತೆಗೆದು ಮನೆಗಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ದಾಸರಹಳ್ಳಿಯ ಮಂಜುನಾಥ್‌ ಅಲಿಯಾಸ್‌ ಕಿಟಕಿ ಮಂಜ (26), ಮುನೇಶ್ವರ ಬ್ಲಾಕ್‌ನ ಗುರು (24) ಬಂಧಿತರು. ಇವರಿಂದ 2.5 ಲಕ್ಷ ರೂ. ಮೌಲ್ಯದ 48 ಗ್ರಾಂ. ತೂಕದ ಚಿನ್ನ ಸರ, 1 ಬೈಕ್‌ ವಶಪಡಿಸಿಕೊಳ್ಳಲಾಗಿದೆ.

Advertisement

ಆರೋಪಿಗಳು ಬೀಗ ಹಾಕಿದ ಮನೆಗಳನ್ನು ಗುರುತಿಸಿ, ರಾತ್ರಿ ಹೊತ್ತು ಕಿಟಕಿ ಮೂಲಕ ಕೈ ಹಾಕಿ ಚೀಲಕ ತೆಗೆದು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಂಜುನಾಥ ಬೆಳಗ್ಗೆ ವೇಳೆ ಹೂವಿನ ಅಲಂಕಾರದ ಕೆಲಸ ಮಾಡುತ್ತಿದ್ದು, ರಾತ್ರಿ ನಗರದ ಕೆಲ ಶ್ರೀಮಂತರ ಮನೆಗಳ ಕಿಟಕಿ ಮೂಲಕ ಕೈ ತೂರಿಸಿ, ಬೆಲೆ ಬಾಳುವ ವಸ್ತುಗಳನ್ನು ದೋಚುತ್ತಿದ್ದ.

ಅಲ್ಲದೆ ಕಿಟಕಿಯ ಪಕ್ಕ ಮಲಗಿ ನಿದ್ರೆಯಲ್ಲಿದ್ದವರ ಕತ್ತಿನಲ್ಲಿದ್ದ ಚಿನ್ನದ ಸರ, ಉಂಗುರ ಕದ್ದು ಪರಾರಿಯಾಗುತ್ತಿದ್ದ. ಒಂದು ವೇಳೆ ಮನೆಯೊಳಗೆ ಹೋಗಲು ಸಾಧ್ಯವಾಗದಿದ್ದರೆ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನಗಳ ಲಾಕ್‌ ಮುರಿದು ಕಳವು ಮಾಡುತ್ತಿದ್ದ.

ಈತನ ಕೃತ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ತನ್ನನ್ನು ಪೊಲೀಸರು ಹುಡುಕುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ತಲೆ ಬೋಳಿಸಿಕೊಂಡು ಓಡಾಡುತ್ತಿದ್ದ. ಇನ್ನೊಬ್ಬ ಆರೋಪಿ ಈತನಿಗೆ ಕಳವು ಮಾಡಲು ಸಹಕರಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಗಿರಿನಗರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next