Advertisement

23 ಜನರಿಗೆ ಹೋಂ ಕ್ವಾರಂಟೈನ್‌

03:27 PM Jul 10, 2020 | Suhan S |

ಮಹಾಲಿಂಗಪುರ: ಕಳೆದ ಆರೇಳು ದಿನಗಳ ಹಿಂದೆ ಕಾಲಿನ ಶಸ್ತ್ರ ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದ ಪಟ್ಟಣದ ಬುದ್ನಿಪಿಡಿ ನಿವಾಸಿಗೆ ಕೋವಿಡ್ ದೃಢಪಟ್ಟಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

Advertisement

ಜು.7ರ ಧಾರವಾಡ ಹೆಲ್ತ್‌ ಬುಲೆಟಿನ್‌ ದಲ್ಲಿ ಪತ್ತೆಯಾದ ಡಿಡಬ್ಲೂಡಿ 643ನೇ ಕೋವಿಡ್ ರೋಗಿ ಪಟ್ಟಣದ ನಿವಾಸಿ ಎಂದು ಬುಧವಾರ ರಾತ್ರಿ ಖಚಿತ ಮಾಹಿತಿ ನಂತರ ಬುದ್ನಿಪಿಡಿ ಏರಿಯಾವನ್ನು ಸೀಲ್‌ ಡೌನ್‌ ಮಾಡಿ, ಆ ಏರಿಯಾವನ್ನು ಕಂಟೇನ್ಮೆಂಟ್‌ ಜೋನ್‌ ಆಗಿ ಪರಿವರ್ತಿಸಲಾಗಿದೆ. ಜತೆಗೆ ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 6 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿತ್ತು.

23 ಜನರಿಗೆ ಕ್ವಾರಂಟೈನ್‌: ಪಟ್ಟಣದ ಮೊದಲ ಕೋವಿಡ್ ರೋಗಿಯ ಪ್ರಾಥಮಿಕ ಸಂಪರ್ಕ ಹೊಂದಿದ ರೋಗಿಯ ಸಂಬಂಧ  ಯುವಕನ ಪ್ರಿಂಟಿಂಗ್‌ ಪ್ರಸ್‌ ಇರುವ ಏರಿಯಾಕ್ಕೆ ಸಾರ್ವಜನಿಕರು ಪ್ರವೇಶಿಸದಂತೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಜೊತೆಗೆ ರೋಗಿಯ ದ್ವಿತೀಯ ಸಂಪರ್ಕದಲ್ಲಿರುವ 23 ಜನರನ್ನು ಗುರುವಾರ ಹೋಂ ಕ್ವಾರಂಟೈನ್‌ ಮಾಡಲಾಗಿದೆ ಎಂದು ತಾಲೂಕು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಐದು ತಿಂಗಳಿಂದ ಕೋವಿಡ್ ಕಾಟವಿಲ್ಲದೇ ನಿರಾಳವಾಗಿದ್ದ ಮಹಾಲಿಂಗಪುರಕ್ಕೆ ಕೋವಿಡ್ ವಕ್ಕರಿಸಿ, ಪಟ್ಟಣದ ಜನತೆಯಲ್ಲಿ ಆತಂಕ ಮೂಡಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next