Advertisement

ಗಿಡಮೂಲಿಕೆ ಔಷಧಿಗಿದೆ ರೋಗ ಗುಣಪಡಿಸುವ ಶಕ್ತಿ

02:03 PM Jun 11, 2018 | |

ಮರಿಯಮ್ಮನಹಳ್ಳಿ: ದೀರ್ಘ‌ಕಾಲ ಬಾಧಿಸುವ ರೋಗಗಳನ್ನು ಗಿಡಮೂಲಿಕೆಗಳಿಂದ ಗುಣಪಡಿಸಲು ಸಾಧ್ಯ ಎಂದು
ಪಟ್ಟಣದ ಗುರುಪಾದ ದೇವರ ಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ದಮ್ಮು, ಕೆಮ್ಮಿಗೆ ಉಚಿತ ಔಷಧ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

Advertisement

ನಮ್ಮ ದೇಶದಲ್ಲಿ ಹಿಂದಿನಿಂದಲೂ ಆಯುರ್ವೇದ ಪದ್ಧತಿಯನ್ನು ಅನುಸರಿಸುತ್ತಾ ಬರಲಾಗುತ್ತಿದೆ. ಮೃಗಶಿರ ಮಳೆ ನಕ್ಷತ್ರ ಕೂಡುವ ವೇಳೆಗೆ ನೀಡಲಾಗುವ ದಮ್ಮು, ಕೆಮ್ಮಿನ ಔಷಧಿ ಯನ್ನು ಪ್ರತಿಯೊಬ್ಬರೂ ಸತತ ಮೂರು ವರ್ಷಗಳ ಕಾಲ ತೆಗೆದುಕೊಳ್ಳಬೇಕು ಎಂದರು.

ಎಲ್ಲಕ್ಕಿಂತಲೂ ಹೆಚ್ಚಾಗಿ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯ. ಪ್ರತಿಯೊಬ್ಬರೂ ಆರೋಗ್ಯದತ್ತ ಹೆಚ್ಚಿನ
ಗಮನ ಹರಿಸಬೇಕು. ಇತ್ತೀಚೆನ ದಿಮಾನಗಳಲ್ಲಿ ಯುವಕರು ಧೂಮಪಾನ, ಮದ್ಯಪಾನ ಸೇರಿದಂತೆ ಇನ್ನಿತೆ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಅವುಗಳಿಂದ ದೂರವಿರಬೇಕು. ಪೋಷಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರ ಮೂಲಕ ಉತ್ತಮ ನಾಗರಿರಕರನ್ನಾಗಿ ರೂಪಿಸಬೇಕು ಎಂದು ಹೇಳಿದರು. 

ಪ್ರತಿ ವರ್ಷವೂ ಮಠದಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗುವುದು. ಭಕ್ತಾದಿಗಳು ಇದರ ಸದುಪಯೋಗವನ್ನು
ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಗರಗ ನಾಗಲಾಪುರ ದಿ| ದೊಡ್ಡ ಹನುಮಂತಪ್ಪ ಅವರ ಪುತ್ರರಾದ ಉಮಾಪತಿ ಮತ್ತಿ ಗಜೇಂದ್ರ ಅವರು ಔಷಧಿಯನ್ನು ಪಡೆಯಲು ಬಂದಿದ್ದ ನೂರಕ್ಕೂ ಹೆಚ್ಚು ಜನರಿಗೆ ದಮ್ಮು, ಕೆಮ್ಮಿನ ಔಷಧ ವಿತರಿಸಿದರು. 

ಕೊಟ್ಟೂರಿನ ಶ್ರೀ ಶಂಕರ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ಪಟ್ಟಣದ ಚಿತ್ರ ಕಲಾವಿದರಾದ ಎಚ್‌. ಶ್ರೀನಿವಾಸರಾವ್‌, ನಿವೃತ್ತ ಶಿಕ್ಷಕ ಬಿ.ಎಂ.ಎಸ್‌. ಮೃತ್ಯುಂಜಯ, ಡಿ. ಪಾಪಮ್ಮ ಇತರರು ಇದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next