Advertisement

ವಡಗೇರಾದಲ್ಲಿ ವರುಣನ ಆರ್ಭಟ

10:03 AM Jun 30, 2020 | Suhan S |

ವಡಗೇರಾ: ರವಿವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಪಟ್ಟಣದಲ್ಲಿ 52 ಮಿ.ಮೀ. ಭಾರೀ ಮಳೆಯಾಗಿದ್ದು, ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

Advertisement

ಧಾರಾಕಾರ ಮಳೆಯಿಂದಾಗಿ ಶಹಾಪುರ, ಗೂಗಲ್‌ ಸಂಪರ್ಕ ಕಲ್ಪಿಸುವ ರಸ್ತೆ ಬಸವಂತಪುರ, ಮದರಕಲ್‌ ಸೇತುವೆಗಳು ಮುಳುಗಡೆ ಆಗಿದ್ದು ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಅನಕಸೂಗರ ಗ್ರಾಮದಲ್ಲಿ ಕಾಲುವೆ ಮತ್ತು ಮಳೆ ನೀರು ಸೇರಿ ಮಹಾದೇವಪ್ಪ ಸೂರ್ಯವಂಶ ಎಂಬುವರ ಜಮೀನಿಗೆ ನುಗ್ಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಸಾಧಾರಣ ಮಳೆ: ಕಳೆದ ನಾಲ್ಕು ದಿನಗಳಿಂದ ಯಾದಗಿರಿ ಜಿಲ್ಲೆಯಲ್ಲಿ ನಿತ್ಯ ರಾತ್ರಿ ಮಳೆ ಸುರಿಯುತ್ತಿದ್ದು, ರವಿವಾರವೂ ಸಾಧಾರಣ ಮಳೆ ಆಗಿದೆ. ಶಹಾಪುರ ವ್ಯಾಪ್ತಿಯಲ್ಲಿ 21 ಮಿ.ಮೀ., ಹುಣಸಗಿ 45 ಮಿ.ಮೀ., ಸುರಪುರ 37 ಮಿ.ಮೀ., ವಡಗೇರಾ 52 ಮಿ.ಮೀ., ಕೆಂಭಾವಿ 27 ಮಿ.ಮೀ., ಯಾದಗಿರಿ 4 ಮಿ.ಮೀ. ಕಕ್ಕೇರಾ 36 ಮಿ.ಮೀ. ಹಾಗೂ ಗುರುಮಠಕಲ್‌ನಲ್ಲಿ 9 ಮಿ.ಮೀ. ಮಳೆ ಆಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next