Advertisement

ಮಗನ ಕಥೆಗೆ ಅಪ್ಪನೇ ಹೀರೋ

01:13 PM Sep 30, 2021 | Team Udayavani |

ನಟ ಜಗ್ಗೇಶ್‌ ಈ ಹಿಂದೆ ತಮ್ಮ ಪುತ್ರ ಗುರುರಾಜ್‌ಗಾಗಿ “ಗುರು’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಈಗ ಅವರ ಪುತ್ರ ಗುರು, ಜಗ್ಗೇಶ್‌ ಅವರಿಗಾಗಿ ಒಂದು ಕಥೆ ರೆಡಿ ಮಾಡಿದ್ದು, ಆ ಸಿನಿಮಾವನ್ನು ಸ್ವತಃ ಜಗ್ಗೇಶ್‌ ಪುತ್ರ ಗುರುರಾಜ್‌ ನಿರ್ದೇಶಿಸಲಿದ್ದಾರಂತೆ. ಈ ವಿಚಾರವನ್ನು ಜಗ್ಗೇಶ್‌ ಅವರೇ ಹೇಳಿಕೊಂಡಿದ್ದಾರೆ.

Advertisement

“ನನ್ನ ಮಗ ಗುರು ಒಂದು ಅದ್ಭುತವಾದ ಸ್ಕ್ರಿಪ್ಟ್ ರೆಡಿಮಾಡಿಕೊಂಡಿದ್ದಾನೆ. ತುಂಬಾ ಚೆನ್ನಾಗಿದೆ. ನನ್ನ ಕೆರಿಯರ್‌ನ ಒಂದು ವಿಭಿನ್ನವಾದ ಸಿನಿಮಾ ಇದಾಗಲಿದೆ. ಸ್ವತಃ ಗುರು ಈ ಸಿನಿಮಾವನ್ನು ನಿರ್ದೇಶಿಸಲಿದ್ದಾನೆ. ಆರಾಮವಾಗಿ ಮಾಡು, ನಿನ್ನ ಅಪ್ಪನೇ ನಿನ್ನ ಕೈಯಲ್ಲಿದ್ದಾನೆ. ನೀಟಾಗಿ ಪ್ಲ್ರಾನ್‌ ಮಾಡಿಕೋ ಎಂದು ಹೇಳಿದ್ದೇನೆ’ ಎಂದು ತಮ್ಮ ಮಗನ ಸಿನಿಮಾ ಕನಸಿನ ಬಗ್ಗೆ ಹೇಳಿದರು.

ಇದನ್ನೂ ಓದಿ:‘ಕಾಗೆಮೊಟ್ಟೆ’ ಮೇಲೆ ಗರಿಗೆದರಿದ ನಿರೀಕ್ಷೆ: ಅ.1ಕ್ಕೆ ಚಿತ್ರ ತೆರೆಗೆ

ಸದ್ಯ ಜಗ್ಗೇಶ್‌ ನಟನೆಯ “ತೋತಾಪುರಿ-1 ಹಾಗೂ “ತೋತಾಪುರಿ-2′ ಬಿಡುಗಡೆಗೆ ರೆಡಿಯಾಗಿದೆ. ಚಿತ್ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next