Advertisement

ಗುಜರಾತ್ ಕಾಂಗ್ರೆಸ್ ಶಾಸಕನ ಮೇಲೆ ಬಿಜೆಪಿ ಕಾರ್ಯಕರ್ತರ ಗುಂಪಿನಿಂದ ಹಲ್ಲೆ

04:38 PM Oct 09, 2022 | Team Udayavani |

ನವಸಾರಿ : ಗುಜರಾತ್ ಕಾಂಗ್ರೆಸ್ ಶಾಸಕ ಮತ್ತು ಬುಡಕಟ್ಟು ನಾಯಕ ಅನಂತ್ ಪಟೇಲ್ ಅವರ ಮೇಲೆ ನವಸಾರಿ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕಾರಿ ಮತ್ತು ಬೆಂಬಲಿಗರು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

Advertisement

ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಭಾನುವಾರ ನಸುಕಿನಲ್ಲಿ ಖೇರ್ಗಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿರುವ ಸ್ಥಳೀಯ ಬಿಜೆಪಿ ಮುಖಂಡ ಬಾಬು ಅಹಿರ್ ಮತ್ತು ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಟೇಲ್ ಆರೋಪಿಸಿದ್ದಾರೆ.

ಇದನ್ನೂ ಓದಿ : ತರೂರ್ ರೊಂದಿಗಿನ ಸ್ಪರ್ಧೆ ದೇಶ ಮತ್ತು ಪಕ್ಷದ ಒಳಿತಿಗಾಗಿ: ಮಲ್ಲಿಕಾರ್ಜುನ ಖರ್ಗೆ

ಗುಜರಾತ್‌ನಲ್ಲಿ ಕೇಂದ್ರದ ಪಾರ್ -ತಾಪಿ-ನರ್ಮದಾ ಲಿಂಕ್ ಯೋಜನೆಯ ವಿರುದ್ಧ ಆಂದೋಲನದ ನೇತೃತ್ವ ವಹಿಸಿರುವ ಪಟೇಲ್ ಮೇಲಿನ ದಾಳಿಯನ್ನು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಖಂಡಿಸಿ’ಇದು ಬಿಜೆಪಿ ಸರ್ಕಾರದ ಕೋಪದ ಪರಿಣಾಮವಾಗಿದೆ’ ಎಂದು ಹೇಳಿದ್ದಾರೆ.

ಆದಾಗ್ಯೂ, ಬಿಜೆಪಿಯು ದಾಳಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು,’ಇದು ಅನುಕಂಪ ಗಳಿಸುವ ಸಾಹಸ, ತನಿಖೆಯ ಅಗತ್ಯವಿದೆ’ ಎಂದು ಹೇಳಿದೆ.

Advertisement

ಎಫ್‌ಐಆರ್‌ನ ಪ್ರಕಾರ, ನವಸಾರಿಯ ವಂಸ್ಡಾದ ಶಾಸಕ ಪಟೇಲ್ ಅವರು ಶನಿವಾರ ಸಂಜೆ ಸಭೆಗೆ ತೆರಳುತ್ತಿದ್ದಾಗ ಖೇರ್ಗಾಮ್‌ನಲ್ಲಿ ಸುಮಾರು 50 ಜನರ ಗುಂಪು ದಾಳಿ ಮಾಡಿದೆ ಮತ್ತು ಅವರ ವಾಹನವನ್ನು ಹಾನಿಗೊಳಿಸಿದೆ.

ಅಹಿರ್ ಹೊರತುಪಡಿಸಿ, ಎಫ್‌ಐಆರ್‌ನಲ್ಲಿ ಇತರ ಐವರು ಆರೋಪಿಗಳು ಮತ್ತು ದಾಳಿಯ ಹಿಂದೆ 40-45 ಜನರ ಗುಂಪನ್ನು ಹೆಸರಿಸಲಾಗಿದೆ. ಗರ್ಬಾ ಕಾರ್ಯಕ್ರಮವೊಂದರಲ್ಲಿ ತನ್ನ ಬೆಂಬಲಕ್ಕಾಗಿ ಹಾಡಿದ ಹಾಡಿನ ಬಗ್ಗೆ ಆರೋಪಿ ಬಿಜೆಪಿ ನಾಯಕ ಅಸಮಾಧಾನಗೊಂಡಿದ್ದರಿಂದ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪಟೇಲ್ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

ಟ್ರಾಫಿಕ್‌ನಿಂದಾಗಿ ವಾಹನ ನಿಲ್ಲಿಸಿದಾಗ ಆರೋಪಿಗಳು ತಮ್ಮ ವಾಹನದ ಬಳಿಗೆ ಬಂದು ಹೊರಗೆ ಬರುವಂತೆ ಹೇಳಿದರು ಎಂದು ಶಾಸಕರು ಹೇಳಿದ್ದಾರೆ. ಅವರು ನಿರಾಕರಿಸಿದಾಗ, ಅವರು ಬಾಗಿಲು ತೆರೆಯಲು ಕಾರಿನ ಗಾಜು ಒಡೆದರು. ಆರೋಪಿಗಳು ಹಲವು ಬಾರಿ ಗುದ್ದಿದ್ದಾರೆ ಮತ್ತು ನಿಂದನೆಯನ್ನೂ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಪಟೇಲ್ ಅವರ ಬಲಗಣ್ಣಿಗೆ ಗಾಯಗಳಾಗಿವೆ.

ಈ ವರ್ಷದ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next