Advertisement

ಜಿಎಸ್‌ಬಿ ಸೇವಾ ಮಂಡಲ ಸಯಾನ್‌: ವಾರ್ಷಿಕ ಮಹಾಸಭೆ

02:23 PM Nov 03, 2017 | Team Udayavani |

ಮುಂಬಯಿ: ಜಿಎಸ್‌ಬಿ ಸೇವಾ ಮಂಡಲ ಸಯಾನ್‌ ಇದರ 66ನೇ ವಾರ್ಷಿಕ ಮಹಾಸಭೆಯು ಅ. 28ರಂದು ಸಯಾನ್‌ನಲ್ಲಿರುವ ಸೇವಾ ಮಂಡಲದ ಶ್ರೀ ಗುರುಗಣೇಶ ಪ್ರಸಾದ್‌ ಸಭಾಗೃಹದಲ್ಲಿ ಸಂಸ್ಥೆಯ ಅಧ್ಯಕ್ಷ ಯಶವಂತ್‌ ಜಿ. ಕಾಮತ್‌ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಪ್ರಾರಂಭದಲ್ಲಿ ವೇದಮೂರ್ತಿ ಬಂಟ್ವಾಳ ಕೃಷ್ಣ ಎಸ್‌. ಭಟ್‌ ಅವರು ದೇವತಾ ಪ್ರಾರ್ಥನೆಗೈದರು. ಇದೇ ಸಂದರ್ಭದಲ್ಲಿ ಗತ ಸಾಲಿನಲ್ಲಿ ನಿಧನ ಹೊಂದಿದ ಸದಸ್ಯ ಬಾಂಧವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ರಾಮನಾಥ ಕಿಣಿ ಅವರು ಕಳೆದ ವಾರ್ಷಿಕ ಮಹಾಸಭೆಯ ವರದಿ ಮಂಡಿಸಿ, ಸರ್ವಾನುಮತದಿಂದ ಅನುಮೋದನೆ ಪಡೆದರು. ಕೋಶಾಧಿಕಾರಿ ವಿಜಯ ಎಸ್‌. ಭಟ್‌ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ, ಸಭೆಯ ಅಂಗೀಕಾರ ಪಡೆಡರು. 2017-18ನೇ ಸಾಲಿಗೆ ಲೆಕ್ಕ ಪರಿಶೋಧಕರಾಗಿ ಮೆ| ಜಿ. ಆರ್‌. ನಾಯಕ್‌ ಆ್ಯಂಡ್‌ ಕಂಪೆನಿ

ಯನ್ನು ನೇಮಿಸಲಾಯಿತು. ಬಳಿಕ ಆಡಳಿದ ಮಂಡಳಿಯ 2018-19ನೇ ಸಾಲಿನ ಬಜೆಟ್‌ನ್ನು ಮಹಾಸಭೆಯಲ್ಲಿ ಪ್ರಕಟಿಸಲಾಯಿತು.

ಅಧ್ಯಕ್ಷ ಯಶವಂತ್‌ ಜಿ. ಕಾಮತ್‌ ಅವರು ಸ್ವಾಗತಿಸಿ ಮಾತನಾಡಿ, ಮಂಡಲದ ಇಂದಿನ ವೈಭವಕ್ಕೆ ಕಾರಣವಾಗಿರುವ ವಾಲ್ಕೇಶ್ವರದಲ್ಲಿನ ಶ್ರೀ ಮಾಧವೇಂದ್ರ ತೀರ್ಥ ಸ್ವಾಮೀಜಿಗಳ ಜೀವಂತ ಸಮಾಧಿಯ ಆಶೀರ್ವಾದ ಹಾಗೂ ಪರಮಪೂಜ್ಯ ಶ್ರೀ ಸುಧೀಂದ್ರ ತೀರ್ಥರ ದಿವ್ಯ ಮಾರ್ಗದರ್ಶನವಾಗಿದೆ. ಸೇವಾ ಮಂಡಲವು 2004ರಲ್ಲಿ ಸ್ವರ್ಣ ಮಹೋತ್ಸವ ಗಣೇಶೋತ್ಸವ ಪ್ರಯುಕ್ತ ಶ್ರೀ ಸುಧೀಂದ್ರ ತೀರ್ಥರ ಆದೇಶಾನುಸಾರವಾಗಿ ವಿದ್ಯಾಸಂಕುಲದ ಸ್ಥಾಪನೆಗಾಗಿ ಸುಮಾರು 10 ಎಕರೆ ಜಾಗವನ್ನು ಮೀರಾ-ಭಾಯಂದರ್‌ ವಸಾಹವೆ ಎಂಬಲ್ಲಿ ಖರೀದಿಸಿತ್ತು. ಕಾರಣಾಂತರಗಳಿಂದ ಸ್ಥಗಿತಗೊಂಡ ಈ ಯೋಜನೆ ಕಳೆದಎರಡು-ಮೂರು ವರ್ಷಗಳಿಂದ ಎಲ್ಲಾ ಎಡರು ತೊಡರುಗಳನ್ನು ಎದುರಿಸಿ ನಿವಾರಿಸಿಕೊಂಡು ಮೆಡಿಕಲ್‌ ಪ್ರೊಜೆಕ್ಟ್ ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ಇತ್ತೀಚೆಗೆ ಈ ಸಂಬಂಧ ಯೋಜನೆ
ಯನ್ನು ದಾಖಲಿಸಿದ್ದು, ಅಂಗೀಕಾರದ ನಿರೀಕ್ಷೆಯಲ್ಲಿದ್ದೇವೆ. 

ಸದಸ್ಯರೆಲ್ಲರ ಸಹಕಾರದಿಂದ ಈ ಯೋಜನೆ ಕಾರ್ಯಗತವಾಗಿ ಶ್ರೀ ಸುಧೀಂದ್ರ ತೀರ್ಥರ ಕನಸು ನನಸಾಗುವಂತೆ ಶ್ರೀ ಮಹಾಗಣಪತಿ ಗುರುಗಳ ಆಶೀರ್ವಾದವನ್ನು ನಾವೆಲರೂ ಬಯಸುತ್ತಿದ್ದೇವೆ. ಸಂಸ್ಥೆಯ ಸಮಾಜಪರ ಕಾರ್ಯಗಳಿಗೆ ಎಲ್ಲರ ಸಹಕಾರವಿರಲಿ ಎಂದರು. 

Advertisement

ಗೌರವ ಕಾರ್ಯದರ್ಶಿ ರಾಮನಾಥ ಕಿಣಿ ವಂದಿಸಿದರು. ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಮಹಾಸಭೆಯ ಯಶಸ್ಸಿಗೆ ಸಹಕರಿಸಿದರು. ಸಮಾಜ ಬಾಂಧವರು, ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
 

Advertisement

Udayavani is now on Telegram. Click here to join our channel and stay updated with the latest news.

Next