Advertisement

ವಿಮಾನ ನಿಲ್ದಾಣದಲ್ಲಿ ಹಸಿರು ಹೊದಿಕೆ

05:10 AM Jun 06, 2020 | Lakshmi GovindaRaj |

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಈಗ ಹಸಿರು ಹೊದಿಕೆ ಹಾಸಲಾಗಿದೆ. ಈ ಹಚ್ಚಹಸಿರಿ ನ ನಡುವೆ ಲೋಹದ ಹಕ್ಕಿಗಳ ವಿಹಾರದಿಂದಾಗಿ ಇಡೀ ನಿಲ್ದಾಣಕ್ಕೆ ವಿಶಿಷ್ಟ ಮೆರುಗು  ಬಂದಿದೆ. ನಿಲ್ದಾಣ ಹಾಗೂ ಅದರ ಸುತ್ತಲಿನ ನೂರು ಎಕರೆ ಪ್ರದೇಶ ಹಸಿರ ಸಿರಿಯಿಂದ ಕಂಗೊಳಿಸುತ್ತಿದೆ.

Advertisement

ಇದಕ್ಕೆ ಕಾರಣ ಸ್ಮಾರ್ಟ್‌ ಸ್ವಯಂಚಾಲಿತ ನೀರಾವರಿ ವ್ಯವಸ್ಥೆ. ಹವಾಮಾನ ಮತ್ತು ತಂತ್ರಜ್ಞಾನ ಆಧಾರದಿಂದ ಈ ವ್ಯವಸ್ಥೆ ಕೆಲಸ  ಮಾಡುತ್ತ ದೆ. ಮೊಬೈಲ್‌ ಫೋನ್‌ ಮೂಲಕ ದೂರದಿಂ  ದಲೇ ಈ ವ್ಯವಸ್ಥೆ ನಿರ್ವಹಿಸಬಹುದು. ಇದರಿಂದ ಶೇ. 30 ನೀರನ್ನು ಉಳಿಸಬಹುದಾಗಿದೆ. ಇದರೊಂ  ದಿಗೆ ಇಂತಹ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ವಿಮಾನ  ನಿಲ್ದಾಣ ಎಂಬ ಹೆಗ್ಗಳಿಕೆಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ ಎಂದು ಬಿಐಎಎಲ್‌ ಹೇಳಿದೆ.

ಲಾಕ್‌ಡೌನ್‌ನಂತಹ ಸಂದರ್ಭದಲ್ಲಿ ಈ ವಿಸ್ತಾರವಾದ ತೋಟದ ಪ್ರದೇಶವನ್ನು ಕಾರ್ಯಕ್ಷಮತೆಯೊಂದಿಗೆ  ನಿರ್ವಹಿಸಲು ಈ ವ್ಯವಸ್ಥೆಯಿಂದ ಸಾಧ್ಯವಾಗಲಿದೆ. ಮಣ್ಣಿನ ತೇವಾಂಶ, ನೀರಿನ ಹರಿವು ಮತ್ತು ಮಳೆಯ ಪ್ರಮಾಣ ಅಳೆಯುವ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಪ್ರತಿ ಗಿಡಕ್ಕೆ ಅಗತ್ಯ ಇರುವಷ್ಟು ಮಾತ್ರ ನೀರನ್ನು ಹನಿ ನೀರಾವರಿ  ಪದಟಛಿತಿಯಲ್ಲಿ ಪೂರೈಸಲಾಗುತ್ತದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next