Advertisement

ಹೆದ್ದಾರಿ ಹೊಂಡಗಳಿಗೆ ಜಲ್ಲಿ ಹುಡಿ

11:32 AM Jul 15, 2018 | Team Udayavani |

ಬೆಳ್ತಂಗಡಿ: ಬಿ.ಸಿ. ರೋಡ್‌ -ಚಾರ್ಮಾಡಿ ರಾ.ಹೆ.ಯ ಬೆಳ್ತಂಗಡಿ ನಗರ ದಲ್ಲಿದ್ದ ಹೊಂಡಗಳಿಗೆ ಹೆದ್ದಾರಿ ಇಲಾಖೆಯು
ಕೊಂಚ ಮುಕ್ತಿ ನೀಡಿದ್ದು, ಶನಿವಾರ ಹೊಂಡಗಳಿಗೆ ಜಲ್ಲಿಹುಡಿ ಹಾಕಿದ್ದಾರೆ. ಹೆದ್ದಾರಿ ಹೊಂಡಗಳಿಂದ ಸಂಚಾರಕ್ಕೆ ತೊಂದರೆಯಾಗಿರುವ ಬಗ್ಗೆ ಶನಿವಾರ ಸುದಿನದಲ್ಲಿ ‘ಬಿ.ಸಿ. ರೋಡ್‌ – ಚಾರ್ಮಾಡಿ ಹೆದ್ದಾರಿ ಹೊಂಡ ಮುಚ್ಚಿ’ ಶೀರ್ಷಿಕೆಯಲ್ಲಿ ಸಚಿತ್ರ ವರದಿ ಪ್ರಕಟಗೊಂಡಿತ್ತು. ವರದಿಗೆ ಸ್ಪಂದನೆ ಎಂಬಂತೆ ಬೆಳ್ತಂಗಡಿಯ ಬಸ್‌ ನಿಲ್ದಾಣದ ಬಳಿ, ಮೂರು ಮಾರ್ಗದ ಬಳಿ, ಸಂತೆಕಟ್ಟೆ ಬಳಿ ಜಲ್ಲಿಹುಡಿ ಹಾಕಿ ತಾತ್ಕಾಲಿಕ ಪರಿಹಾರ ನೀಡಿದೆ. ಹೊಂಡಗಳಿಂದ ಎದ್ದು ಬಿದ್ದು ಸಾಗುತ್ತಿದ್ದ ವಾಹನಗಳು ಶನಿವಾರ ಕೊಂಚ ಸರಾಗವಾಗಿ ಸಾಗಿವೆ.

Advertisement

ಹೆದ್ದಾರಿಯ ಹೊಂಡಗಳಿಗೆ ನಾವು ಈ ಹಿಂದೆಯೂ ವೆಟ್‌ಮಿಕ್ಸ್‌ ಹಾಕಿದ್ದೇವೆ. ನಿರಂತರ ಮಳೆ ಸುರಿಯುತ್ತಿರುವುದರಿಂದ ಹುಡಿ ಎದ್ದು ಹೋಗುತ್ತಿದೆ. ಮಳೆಗಾಲದ ನಿರ್ವಹಣೆಗೆ ಬೇರೆ ಅನುದಾನ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next