Advertisement

ಕೋವಿಡ್ ಕಳವಳ: ಭಾನುವಾರದ ಲಾಕ್ ಡೌನ್ ಗೆ ಉತ್ತಮ ಬೆಂಬಲ

12:09 PM Jul 05, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಕರೆಕೊಟ್ಟಿದ್ದ ಒಂದು ದಿನದ ಲಾಕ್ ಡೌನ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

Advertisement

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಉಳಿದಿದ್ದಾರೆ. ಇಂದು ತಮ್ಮ ಭೇಟಿಗೆ ಯಾರಿಗೆ ಅವಕಾಶ ನೀಡಿಲ್ಲ ಎನ್ನಲಾಗಿದೆ.

ರಾಜ್ಯದಲ್ಲಿ ಅಗತ್ಯ ವಸ್ತುಗಳು ಹೊರತುಪಡಿಸಿ ಉಳಿದೆಲ್ಲಾ ಬಂದ್ ಆಗಿದೆ. ಹಾಲು, ಮೆಡಿಕಲ್, ಪೇಪರ್ ಮುಂತಾದ ಅಗತ್ಯ ವಸ್ತುಗಳಿಗೆ, ಅಗತ್ಯ ಸರಂಜಾಮು ಸಾಗಿಸಲು ಮಾತ್ರ ಇಂದು ಅವಕಾಶವಿದೆ.

ಕೆಎಸ್ ಆರ್ ಟಿಸಿ ಬಸ್ ಗಳು ಕೂಡಾ ಇಂದು ಸಂಚಾರ ಸ್ಥಗಿತಗೊಳಿಸಿದೆ. ಬಹುತೇಕ ಆಟೋ ರಿಕ್ಷಾ, ಟ್ಯಾಕ್ಸಿಗಳು ಕೂಡಾ ಇಂದು ರಸ್ತೆಗಿಳಿದಿಲ್ಲ.

Advertisement

Advertisement

Udayavani is now on Telegram. Click here to join our channel and stay updated with the latest news.

Next