Advertisement

“ವಾಪಸ್‌ ಮಾಡಲ್ಲವಾದರೆ’ ಮಾತ್ರ ಪ್ರಶಸ್ತಿ ಪಡೆಯಿರಿ!

12:11 AM Jul 26, 2023 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ಸರಕಾರದಿಂದ ಯಾವುದೇ ಪ್ರಶಸ್ತಿಯನ್ನು ಪಡೆಯುವವರು “ಯಾವ ಕಾರಣಕ್ಕೂ ಪ್ರಶಸ್ತಿ ವಾಪಸ್‌ ಮಾಡುವುದಿಲ್ಲ’ ಎಂದು ಬರೆದಿರುವ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ಅನಂತರವೇ ಪ್ರಶಸ್ತಿಯನ್ನು ಪಡೆದು ಕೊಳ್ಳಬೇಕು! ಇದು ಸಾರಿಗೆ, ಪ್ರವಾಸೋದ್ಯಮ ಮ ತ್ತು ಸಂಸ್ಕೃತಿಗೆ ಸಂಬಂಧಿಸಿದ ಸಂಸದೀ ಯ ಸ್ಥಾಯೀ ಸಮಿತಿ ನೀಡಿರುವ ಸಲ ಹೆ. ಮಂಗಳವಾರ ಸಂಸತ್‌ನ ಎರಡೂ ಸದನಗಳಿಗೆ ಸಲ್ಲಿಸಲಾದ ವರದಿಯಲ್ಲಿ ಸಮಿತಿ ಈ ರೀತಿ ಶಿಫಾರಸು ಮಾಡಿದೆ.

Advertisement

ಇತ್ತೀಚಿನ ಕೆಲವು ವರ್ಷಗಳಿಂದೀಚೆಗೆ “ಪ್ರಶಸ್ತಿ ವಾಪ್ಸಿ’ ಅಭಿಯಾನಗಳು ಹೆಚ್ಚಾಗುತ್ತಿರುವ ಕುರಿತು ಸಮಿತಿಯು ಕಳವಳ ವ್ಯಕ್ತಪಡಿಸಿದೆ. ಜತೆಗೆ ರಾಜಕೀಯ ಕಾರಣಗಳಿಗಾಗಿ ಪ್ರಶಸ್ತಿಗಳನ್ನು ಮರಳಿಸುವಂಥ ಟ್ರೆಂಡ್‌ ಅನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲವು ಸಲಹೆಗಳನ್ನು ಸಮಿತಿ ನೀಡಿದೆ. ಅದರಂತೆ “ಇನ್ನು ಮುಂದೆ ಸರಕಾರದ ಪ್ರಶಸ್ತಿಯನ್ನು ಯಾರಿಗಾದರೂ ನೀಡುವುದಿದ್ದರೆ ಮೊದಲು ಅವರಿಂದ “ಭವಿಷ್ಯದಲ್ಲಿ ಪ್ರಶಸ್ತಿ ವಾಪಸ್‌ ಮಾಡುವುದಿಲ್ಲ’ ಎಂಬ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಬೇಕು. ಒಂದು ವೇಳೆ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ ಬಳಿಕವೂ ಪ್ರಶಸ್ತಿಯನ್ನು ಅವರು ಮರಳಿಸಿದ್ದೇ ಆದಲ್ಲಿ ಅಂಥವರನ್ನು ಮುಂದೆ ಯಾವತ್ತೂ ಪ್ರಶಸ್ತಿಗಳಿಗೆ ಪರಿಗಣಿಸಬಾರದು. ಸಾಹಿತ್ಯ ಅಕಾಡೆಮಿ ಸಹಿತ ಕೆಲವು ರಾಜಕೀಯೇತರ ಸಂಸ್ಥೆಗಳಲ್ಲಿ ರಾಜಕೀಯಕ್ಕೆ ಅವಕಾಶವಿಲ್ಲ’ ಎಂದು ವೈಎಸ್ಸಾರ್‌ ಕಾಂಗ್ರೆಸ್‌ ಪ ಕ್ಷದ ವಿಜಯ್‌ ಸಾಯಿ ರೆಡ್ಡಿ ನೇತೃತ್ವದ ಸಮಿತಿ ಹೇಳಿದೆ.

2015ರಲ್ಲಿ ಕರ್ನಾಟಕದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯನ್ನು ಖಂಡಿಸಿ ಉದಯ ಪ್ರಕಾಶ್‌, ನಯನತಾರಾ ಸೆಹಗಲ್‌, ಅಶೋಕ್‌ ವಾಜಪೇಯಿ ಸಹಿತ 33 ಖ್ಯಾತನಾಮರು ತಮ್ಮ ಪ್ರಶಸ್ತಿಗಳನ್ನು ವಾಪಸ್‌ ಮಾಡಿದ್ದರು. ಅಲ್ಲಿಂದ ಅನಂತರ, “ಅವಾರ್ಡ್‌ ವಾಪ್ಸಿ’ ಎನ್ನುವುದು ಪ್ರತಿಭಟನೆಯ ಅಸ್ತ್ರವಾಗಿ ಬದಲಾಯಿತು. ಬೇರೆ ಬೇರೆ ಘಟನೆಗಳು ನಡೆದಾಗ ಪ್ರತಿಭಟನಾರ್ಥವಾಗಿ ಪ್ರಶಸ್ತಿ ವಾಪಸ್‌ ಮಾಡುವಂಥದ್ದು ಮರುಕಳಿಸುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next