Advertisement

Gangavathi; ಹಾಡಹಗಲೇ ಚಿರತೆ ದಾಳಿ: ಆಕಳು ಮೃತ್ಯು

07:46 PM Aug 18, 2023 | Team Udayavani |

ಗಂಗಾವತಿ :ಹಾಡಹಗಲೇ ಚಿರತೆ ದಾಳಿ ಮಾಡಿದ್ದರಿಂದ ಹಸು ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ವಿರುಪಾಪುರ ಗಡ್ಡಿ ಋಷಿಮುಖ ಪರ್ವತ ಪ್ರದೇಶದಲ್ಲಿ ಶುಕ್ರವಾರ ನಡೆದಿದೆ.

Advertisement

ವಿರುಪಾಪುರ ಗಡ್ಡಿ ನಿವಾಸಿ ವಿರೂಪಣ್ಣ ಎಂಬುವರಿಗೆ ಸೇರಿದ ಹಸು ಋಷಿಮುಖ ಪರ್ವತ ಪ್ರದೇಶದಲ್ಲಿ ಮೇಯುವ ಸಂದರ್ಭದಲ್ಲಿ ಏಕಾಏಕಿ ಚಿರತೆ ದಾಳಿ ನಡೆಸಿದೆ.ಮಾಲಕರು ದಾಳಿ ನಡೆಸಿದ್ದನ್ನು ಕಂಡು ಕೂಗಾಡಿದ್ದರಿಂದ ಹಸುವನ್ನು ಗಂಭೀರವಾಗಿ ಗಾಯಗೊಳಿಸಿ ಚಿರತೆ ಪಲಾಯನ ಮಾಡಿದೆ. ಸ್ಥಳದಲ್ಲೇ ಹಸು ಮೃತಪಟ್ಟಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪಶುಸಂಗೋಪನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪರಿಹಾರಕ್ಕೆ ಆಗ್ರಹ: ಸುಮಾರು 50 ಸಾವಿರ ಮೌಲ್ಯದ ಹಸು ಸಾವನ್ನಪ್ಪಿದ್ದು ಅರಣ್ಯ ಇಲಾಖೆಯವರು ಹಸು ಕಳೆದುಕೊಂಡ ವ್ಯಕ್ತಿಗೆ ಕೂಡಲೇ ಪರಿಹಾರ ಕಲ್ಪಿಸುವಂತೆ ಗ್ರಾ.ಪಂ. ಸದಸ್ಯ ರಘುವರ್ಮ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ .ಪದೇಪದೇ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಪ್ರಮುಖ ಸ್ಥಳಗಳಲ್ಲಿ ಬೋನ್ ಗಳನ್ನು ಇಟ್ಟು ಚಿರತೆಗಳನ್ನು ಸೆರೆ ಹಿಡಿಯುವಂತೆ ಅವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next