Advertisement

Gangavathi: ಮಲ್ಲಾಪೂರ-ಕುರಿಹಟ್ಟಿಯಲ್ಲಿ ಮೊಸಳೆ ಪ್ರತ್ಯಕ್ಷ; ಜನತೆಯಲ್ಲಿ ಆತಂಕ

08:16 PM Jun 19, 2023 | Team Udayavani |

ಗಂಗಾವತಿ: ತಾಲೂಕಿನ ಮಲ್ಲಾಪೂರ -ಕುರಿಹಟ್ಟಿ ಗ್ರಾಮದ ಹಳ್ಳದಲ್ಲಿ ಸೋಮವಾರ ಮಧ್ಯಾಹ್ನ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು ಕೂಲಿ ಕಾರ್ಮಿಕರು ಮತ್ತು ರೈತರನ್ನು ಆತಂಕಕ್ಕೀಡು ಮಾಡಿದೆ.

Advertisement

ಮಲ್ಲಾಪೂರ ಕುರಿಹಟ್ಟಿ ಗ್ರಾಮದ ಪಕ್ಕದಲ್ಲಿ ತುಂಗಭದ್ರಾ ಎಡದಂಡೆ ಕಾಲುವೆ ಇದ್ದು ಪ್ರಸ್ತುತ ಕಾಲುವೆಯಲ್ಲಿ ನೀರು ಹರಿಯುವುದನ್ನು ನಿಲ್ಲಿಸಿರುವುದರಿಂದ ಮೊಸಳೆ ಹಳ್ಳದಲ್ಲಿ ಹರಿದು ಬಂದಿರುವ ಸಾಧ್ಯತೆ ಇದೆ. ಹಳ್ಳದಲ್ಲಿ ಕುರಿಹಟ್ಟಿ ಗ್ರಾಮದ ಮಕ್ಕಳು ಮೀನು ಹಿಡಿಯಲು ತೆರಳಿದ ಸಂದರ್ಭದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಮಕ್ಕಳು ಭಯದಿಂದ ಹಳ್ಳದಿಂದ ದೂರ ಬಂದಿದ್ದಾರೆ.

ಮೊಸಳೆ ಪ್ರತ್ಯಕ್ಷವಾದ ಬಳಿಕ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಹಳ್ಳದ ಅಕ್ಕಪಕ್ಕ ಹೊಲಗದ್ದೆ ಕೂಲಿ‌ ಕೆಲಸ ಮಾಡಲು ಮತ್ತು ದನಕರು, ಎಮ್ಮೆ ಮೇಯಿಸಲು ಮಕ್ಕಳು ಸೇರಿ ಜನರು ಆಗಮಿಸುವುದರಿಂದ ಮೊಸಳೆ ದಾಳಿ ಮಾಡುವ ಸಾಧ್ಯತೆ ಇದ್ದು ಅರಣ್ಯ ಇಲಾಖೆಯವರು ಸೆರೆ‌ ಹಿಡಿಯುವಂತೆ ಕುರಿಹಟ್ಟಿ ಗ್ರಾಮದ ಗೌರೀಶ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next