Advertisement

ಜನಪ್ರತಿನಿಧಿಗಳ 2000ಕ್ಕೂ ಅಧಿಕ ಕೇಸ್‌ ಇತ್ಯರ್ಥ

01:27 AM Apr 23, 2024 | Team Udayavani |

ಹೊಸದಿಲ್ಲಿ: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಗಳು ಕಳೆದ ವರ್ಷ 2000ಕ್ಕಿಂತಲೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿರು ವುದಾಗಿ ಸುಪ್ರೀಂ ಕೋರ್ಟ್‌ಗೆ ಅಫಿದವಿತ್‌ ಸಲ್ಲಿಕೆಯಾಗಿದೆ.

Advertisement

ಸಂಸದರು, ಶಾಸಕರ ಮೇಲಿನ ಕ್ರಿಮಿನಲ್‌ ಕೇಸ್‌ಗಳ ತ್ವರಿತ ವಿಲೇ ವಾರಿ ಕೋರಿ ಸಲ್ಲಿಕೆಯಾಗಿರುವ ಪಿಐಎಲ್‌ನ ಅಮಿಕಸ್‌ ಕ್ಯೂರಿಯಾ ಗಿರುವ ವಿಜಯ್‌ ಹನ್ಸಾರಿಯಾ ಅವರು, ಸದರಿ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಇತ್ಯರ್ಥ ಸಂಬಂಧ ಹೈಕೋರ್ಟ್‌ಗಳಿಗೆ ಹೆಚ್ಚಿನ ನಿರ್ದೇಶನದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ತೀರ್ಪು ವಿಳಂಬ ಕಾರಣದಿಂದಲೇ ಕ್ರಿಮಿನಲ್‌ ಕೇಸ್‌ಗಳಿಲ್ಲದ ಅಭ್ಯರ್ಥಿಗಳಿಗಿಂತಲೂ, ಕ್ರಿಮಿನಲ್‌ ಕೇಸ್‌ ಹೊಂದಿರುವ ಅಭ್ಯರ್ಥಿಗಳೇ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದಾರೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next