Advertisement

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

01:34 AM Apr 29, 2024 | Team Udayavani |

ಕಟಕ್‌: ಕೆಲವೇ ಕೋಟ್ಯಧಿಪತಿಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೊಸದಿಲ್ಲಿಯಲ್ಲಿ ಸರಕಾರ ನಡೆಸಿದಂತೆ ಒಡಿಶಾದಲ್ಲಿ ನವೀನ್‌ ಪಟ್ನಾಯಕ್‌ ಆಯ್ದು ವ್ಯಕ್ತಿಗಳಿಗಾಗಿ ಸರಕಾರವನ್ನು ಮುನ್ನಡೆಸು ತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರವಿವಾರ ಗಂಭೀರವಾಗಿ ಆರೋಪಿಸಿದ್ದಾರೆ.

Advertisement

ಒಡಿಶಾದ ಸಲೇಪುರ್‌ನಲ್ಲಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ಅಂಕಲ್‌ಜೀ(ಮೋದಿ) ಮತ್ತು ನವೀನ್‌ ಬಾಬು ಒಡಿಶಾ “ಪಾನ್‌'(ಪಿಎಎಎನ್‌ಎನ್‌) ನೀಡಿದ್ದಾರೆ. “ಪಾನ್‌’ ಎಂದರೆ, ನವೀನ್‌ ಪಟ್ನಾಯಕ್‌ ಆಪ್ತ ವಿ.ಕೆ.ಪಾಂಡ್ಯನ್‌, ಅಮಿತ್‌ ಶಾ, ನರೇಂದ್ರ ಮೋದಿ, ನವೀನ್‌ ಪಟ್ನಾಯಕ್‌. ಇವರೆಲ್ಲರೂ ಸೇರಿ ಗಣಿ ಹಗರಣದ ಮೂಲಕ 9 ಲಕ್ಷ ಕೋಟಿ ರೂ. ಮತ್ತು ಭೂ ಕಬಳಿಕೆ ಮೂಲಕ 20 ಸಾವಿರ ಕೋಟಿ, ಪ್ಲಾಂಟೇಶನ್‌ ಹಗರಣ ಮೂಲಕ 15 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆ ಎಂದು ರಾಹುಲ್‌ ಗಾಂಧಿ ಅವರು ಆರೋಪಿಸಿದರು.

ಚುನಾವಣೆಯಲ್ಲಿ ಬಿಜೆಪಿ ಮತ್ತು ಬಿಜೆಡಿ ಪ್ರತಿಸ್ಪರ್ಧಿಯಾಗಿದ್ದರೂ ವಾಸ್ತವದಲ್ಲಿ ಅವರಿಬ್ಬರೂ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನೂ ನೀವು ಜಂಟಿ ಸಹಭಾಗಿತ್ವ ಎನ್ನಾದರೂ ಅನ್ನಿ ಅಥವಾ ಮದುವೆಯಾದರೂ ಅನ್ನಿ. ಅವರಿಬ್ಬರೂ ಜತೆಯಾಗೇ ಇದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next