Advertisement

ಎಫ್‌ಎಸ್‌ಎಲ್‌ ಇಂಡಿಯಾ ಕಚೇರಿ: ಸಚಿವ ಮಧ್ವರಾಜ್‌ ಭೇಟಿ; ಸಂವಾದ

07:40 AM Sep 11, 2017 | Team Udayavani |

ಕುಂದಾಪುರ: ತಲ್ಲೂರಿನ  ಶೆಟ್ಟರಕಟ್ಟೆಯಲ್ಲಿರುವ  ಎಫ್‌ಎಸ್‌ಎಲ್‌ ಇಂಡಿಯಾ ಆಡಳಿತ ಕಚೇರಿಗೆ ಯುವಜನ, ಕ್ರೀಡಾ, ಮೀನುಗಾರಿಕಾ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಸೆ. 7ರಂದು ಭೇಟಿ ನೀಡಿದರು.

Advertisement

ಈ ಸಂದರ್ಭದಲ್ಲಿ  ಸಂಸ್ಥೆಯ ಅಧ್ಯಕ್ಷ ರಾಖೇಶ್‌ ಸೋನ್ಸ್‌ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ವಿವರಿಸಿ, ವಿವಿಧ ಕಾರ್ಯಕ್ರಮಗಳಾದ ಕಡಲಾಮೆ ಸಂರಕ್ಷಣೆ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಯುವಕರ ಕಾರ್ಯಕ್ರಮ, ಪರಿಸರ ಶಿಕ್ಷಣ ಹಾಗೂ ಭಾರತದ ಇತರ ಭಾಗಗಳಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಎಫ್‌ಎಸ್‌ಎಲ್‌ ಸಂಸ್ಥೆಯು ಅಳವಡಿಸಿಕೊಂಡಿರುವುದನ್ನು ಸಚಿವರು ಪ್ರಶಂಶಿಸಿದರು. ಈ ಸಂದರ್ಭದಲ್ಲಿ  ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ವಿವಿಧ ದೇಶಗಳ 40 ಅಭ್ಯರ್ಥಿಗಳ ಅನಿಸಿಕೆಯನ್ನು ಸಚಿವರು ಆಸಕ್ತಿಯಿಂದ ಆಲಿಸಿ, ಸಂವಾದ ನಡೆಸಿದರು.

ವಿವಿಧ ದೇಶದಿಂದ ಬಂದ ಯುವಕರು ಭಾರತದ ಸಂಸ್ಕೃತಿ, ಆಚಾರ-ವಿಚಾರ ಕಲಿಯುವ ಬಗ್ಗೆ ಮತ್ತು ಅದನ್ನು ತಿಳಿದುಕೊಳ್ಳುವ ಬಗ್ಗೆ ಇರುವ ಆಸಕ್ತಿಯನ್ನು ಸಂಸ್ಥೆಯು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next