Advertisement

ದಿಲ್ಲಿಯಲ್ಲಿ ಪಟಾಕಿ ನಿಷೇಧ ಮುಂದುವರಿಕೆ ಕೋರಿ ಸುಪ್ರೀಂಗೆ ಅರ್ಜಿ

03:52 PM Oct 27, 2017 | udayavani editorial |

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಕ್ಟೋಬರ್‌ 31ರ ಬಳಿಕವೂ ಪಟಾಕಿ ಮಾರಾಟ ನಿಷೇಧವನ್ನು ಮುಂದುವರಿಸಬೇಕೆಂದು ಕೋರುವ ಹೊಸ ಅರ್ಜಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾಗಿದೆ

Advertisement

ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕೇ ಬೇಡವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ವರಿಷ್ಠ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಜಸ್ಟಿಸ್‌ಗಳಾದ ಎ ಎ ಖಾನ್‌ವಿಲ್ಕರ್‌ ಮತ್ತು ಡಿ ವೈ ಚಂದ್ರಚೂಡ್‌ ಅವರನ್ನು ಒಳಗೊಂಡ ಪೀಠ ಹೇಳಿತು.

ದಿಲ್ಲಿಯಲ್ಲಿನ ಈಗಿನ ವಾಯು ಮಾಲಿನ್ಯ ಮಟ್ಟ ಗಂಭೀರ ಇರುವುದನ್ನು ಪರಿಗಣಿಸಿ ಈ ಹೊಸ ಅರ್ಜಿಯಲ್ಲಿನ ಕೋರಿಕೆಯ ಪ್ರಕಾರ ಅ.31ರ ಬಳಿಕವೂ ದಿಲ್ಲಿಯಲ್ಲಿ ಪಟಾಕಿ ಮಾರಾಟ ನಿಷೇಧವನ್ನು ಮುಂದುವರಿಸಬೇಕು ಎಂದು ಅರ್ಜಿದಾರ ಅರ್ಜುನ್‌ ಗೋಪಾಲ್‌ ಅವರ ವಕೀಲರು ಪೀಠದ ಮುಂದೆ ನಿವೇದಿಸಿದರು. 

ಈ ಹಿಂದೆಯೂ ಅರ್ಜಿದಾರ ಅರ್ಜುನ್‌ ಗೋಪಾಲ್‌ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌ ದಿಲ್ಲಿಯಲ್ಲಿ ಪಟಾಕಿ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next