Advertisement

8.71 ಕೋಟಿ ರೂ. ವಂಚನೆ: ಇಬ್ಬರ ಬಂಧನ

07:03 PM Oct 06, 2021 | Team Udayavani |

ಮುಂಬಯಿ: ಅಸಲಿನೊಂದಿಗೆ ಲಾಭ ಕೊಡುವುದಾಗಿ ಹೇಳಿ ಜನರಿಗೆ 8.71 ಕೋಟಿ ರೂಪಾಯಿ ವಂಚಿಸಿದ್ದ ಇಬ್ಬರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

Advertisement

ವಸಾಯಿ ನಗರದಲ್ಲಿ ಅಮಿತ್‌ ಕಂಟಿಲಾಲ್‌ ಜೈನ್‌ ಮತ್ತು ಯೋಗೇಶ್‌ ಭಲೆರಾವ್‌ ಸಣ್ಣದೊಂದು ಕನ್ಸಲ್ಟೆನ್ಸಿ ಕಚೇರಿ ಮಾಡಿಕೊಂಡು ಅದರಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಹೂಡಿಕೆಗೆ ಶೇ. 25ರಿಂದ ಶೇ. 50 ಲಾಭ ಕೊಡುತ್ತೇವೆ ಎಂದು ನಂಬಿಸಿದ್ದಾರೆ. 215 ಮಂದಿ 8.17 ಕೋಟಿ ರೂಪಾಯಿ ಹೂಡಿಕೆ ಮಾಡಿದ ಬಳಿಕ ಇಬ್ಬರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ದುಬಾೖಗೆ ಪರಾರಿಯಾಗಿದ್ದ ಭೋಗೇಶ್‌ ಇತ್ತೀಚೆಗೆ ಗುಜರಾತ್‌ನ ಅಂಬರ್‌ಗಾಂವ್‌ಗೆ ಬಂದು ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಹಾಗೆಯೇ ಚಿಂಚೋಟಿ ಪ್ರದೇಶದಲ್ಲಿ ಅಡಗಿದ್ದ ಅಮಿತ್‌ನನ್ನೂ ಬಂಧಿಸಲಾಗಿದೆ. ಅವರು ಇತ್ತೀಚೆಗೆ ಖರೀದಿಸಿದ್ದ 70 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next