Advertisement

ಟಿಎಂಸಿ ಪ್ರಭಾವಿ ನಾಯಕ ಮುಕುಲ್‌ ರಾಯ್‌ ಬಿಜೆಪಿಗೆ

10:01 AM Nov 04, 2017 | Team Udayavani |

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ನ ದೀರ್ಘ‌ಕಾಲದ ಹಾಗೂ ಎರಡನೇ ಪ್ರಭಾವಿ ನಾಯಕ ಎನಿಸಿಕೊಂಡಿದ್ದ ಮುಕುಲ್‌ ರಾಯ್‌ ಅವರು ಶುಕ್ರವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳದ ಜನತೆ ಮಮತಾ ಬ್ಯಾನರ್ಜಿ ಅವರಿಗೆ ಪರ್ಯಾಯವಾದ ನಾಯಕತ್ವವನ್ನು ಬಯಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಜನ ಬಿಜೆಪಿಯನ್ನೇ ಗೆಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. ರಾಯ್‌ ಬಿಜೆಪಿ ಸೇರ್ಪಡೆಯು ಪ.ಬಂಗಾಲದ ಸಿಎಂ ಮಮತಾಗೆ ಅತಿ ದೊಡ್ಡ ಹೊಡೆತ ಎಂದು ಬಣ್ಣಿಸಲಾಗಿದೆ.

Advertisement

ಸಂಘಟನಾ ಚತುರತೆಗೆ ಹೆಸರಾಗಿರುವ ಕೇಂದ್ರದ ಮಾಜಿ ರೈಲ್ವೆ ಸಚಿವ ರಾಯ್‌ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸಮ್ಮುಖದಲ್ಲಿ ದಿಲ್ಲಿಯಲ್ಲಿ ಕಮಲ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು. ತದನಂತರ ಮಾತನಾಡಿದ ರಾಯ್‌, “ಬಿಜೆಪಿ ಕೋಮುವಾದಿ ಪಕ್ಷವಲ್ಲ, ಅದು ಜಾತ್ಯತೀತ ಪಕ್ಷ. ಸದ್ಯದಲ್ಲೇ ಬಿಜೆಪಿಯು ಬಂಗಾಲದಲ್ಲಿ ಅಧಿಕಾರಕ್ಕೇರಲಿದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next