Advertisement

ಸಚಿವರಿಂದ ಕಲಾವಿದರಿಗೆ ಆಹಾರ ಕಿಟ್‌ ವಿತರಣೆ

06:49 PM Jun 17, 2021 | Team Udayavani |

ಮೈಸೂರು: ಕೋವಿಡ್‌ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ಚಲನಚಿತ್ರ ಸಹ ಕಲಾವಿದರು ಮತ್ತುಹವ್ಯಾಸಿ ರಂಗಕರ್ಮಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವಎಸ್‌.ಟಿ. ಸೋಮಶೇಖರ್‌ ಹಾಗೂ ಕೃಷಿ ಸಚಿವಬಿ.ಸಿ.ಪಾಟೀಲ್‌ ಆಹಾರ ಕಿಟ್‌ ವಿತರಣೆ ಮಾಡಿ,ಲಸಿಕೆ ಆಭಿಯಾನಕ್ಕೆ ಚಾಲನೆ ನೀಡಿದರು.

Advertisement

ನಗರದ ಕಲಾಮಂದಿರ ಆವರಣದಲ್ಲಿ ಸಚಿವಸೋಮಶೇಖರ್‌ ನೀಡಿದ್ದ 520 ಆಹಾರ ಕಿಟ್‌ಗಳನ್ನುಈ ಪೈಕಿ 120 ಚಲನಚಿತ್ರ ಸಹ ಕಲಾವಿದರಿಗೆ ಹಾಗೂ400 ರಂಗಕರ್ಮಿಗಳಿಗೆ ವಿತರಿಸಲಾಗುತ್ತಿದೆ. ಇನ್ನೂಹೆಚ್ಚಿನ ಕಿಟ್‌ ಅಗತ್ಯವಿದ್ದರೆ ಒದಗಿಸಲಾಗುವುದುಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕನಿರ್ದೇಶಕ ಎಚ್‌. ಚೆನ್ನಪ್ಪ ಮಾಹಿತಿ ನೀಡಿದರು.

ಈ ವೇಳೆ ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌,ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಫ‌ಣೀಶ್‌,ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ಜಿಪಂ ಎ.ಎಂ.ಯೋಗೀಶ್‌, ಪಾಲಿಕೆ ಆಯುಕ್ತ ಜಿ. ಲಕ್ಷ್ಮೀಕಾಂತ್‌ರೆಡ್ಡಿ, ಡಿಸಿಪಿ ಗೀತಾ ಪ್ರಸನ್ನ, ರಂಗಕರ್ಮಿಗಳಾದಬಸವಲಿಂಗಯ್ಯ, ಮಂಡ್ಯ ರಮೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next