Advertisement

ಪೊಲೀಸರ ಕೈಯಿಂದ ಕಸಿಯಲಾದ ರೈಫ‌ಲ್‌ಗ‌ಳ ಮರು ವಶಕ್ಕೆ ತಂಡ ರಚನೆ

12:02 PM Oct 04, 2018 | Team Udayavani |

ಮುಜಫ‌ರನಗರ : ಉತ್ತರ ಪ್ರದೇಶದಲ್ಲಿ ಸಶಸ್ತ್ರ ದುಷ್ಕರ್ಮಿಗಳು ಪೊಲೀಸರ ಕೈಯಿಂದ ಕಸಿದುಕೊಂಡಿರುವ ಎರಡು ರೈಫ‌ಲ್‌ಗ‌ಳ ಸಹಿತ ವಿವಿಧ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಐದು ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

Advertisement

ಪೊಲೀಸರ ಕೈಯಿಂದ ರೈಫ‌ಲ್‌ಗ‌ಳನ್ನು ಕಸಿದು ಕೊಂಡು ಪರಾರಿಯಾಗಿರುವ ದುಷ್ಕಮಿಗಳನ್ನು ಪತ್ತೆ ಹಚ್ಚುವ ಸಲುವಾಗಿ ಇದೀಗ ಅವರ ಸಂಭಾವ್ಯ ಅಡಗುದಾಣಗಳನ್ನು ಶೋಧಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸಹರಣ್‌ಪುರ ಡಿಐಜಿ ಶರದ್‌ ಪಛಾನ್‌ ತಿಳಿಸಿದ್ದಾರೆ. 

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಬಿದೋಲಿ ರಸ್ತೆಯಲ್ಲಿ ಶಸ್ತ್ರ ಸಜ್ಜಿತ ದುಷ್ಕರ್ಮಿಗಳು ಮೊನ್ನೆ ಮಂಗಳವಾರ ಪೊಲೀಸರ ಕೈಯಿಂದ ರೈಫ‌ಲ್‌ಗ‌ಳನ್ನು ಕಸಿದುಕೊಂಡು ಹೋಮ್‌ ಗಾರ್ಡ್‌ ಸಂಜಯ್‌ ಎಂಬವರ ಮೇಲೆ ದಾಳಿ ನಡೆಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next