Advertisement

ಶೀಘ್ರ ಇನ್ನಿಬ್ಬರು ಜೆಡಿಎಸ್‌ ಶಾಸಕರು ಬಿಜೆಪಿಗೆ: ಯತ್ನಾಳ

10:52 PM Nov 24, 2019 | Lakshmi GovindaRaj |

ಬಾಗಲಕೋಟೆ: ರಾಜ್ಯದಲ್ಲಿ ಯಾವ ಪಕ್ಷದ ಶಾಸಕರಿಗೂ ಸದ್ಯಕ್ಕೆ ಚುನಾವಣೆ ನಡೆಯುವುದು ಬೇಕಿಲ್ಲ. ಉಪ ಚುನಾವಣೆ ಬಳಿಕ ಯಡಿಯೂರಪ್ಪ ಇನ್ನಷ್ಟು ಗಟ್ಟಿಯಾಗಲಿ ದ್ದಾರೆ. ಜೆಡಿಎಸ್‌ನ ಇನ್ನೂ ಹಲವು ಶಾಸಕರು ಬಿಜೆಪಿಗೆ ಬರಲು ತುದಿಗಾಲ ಮೇಲಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮೂರೂವರೆ ವರ್ಷ ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯಲಿದ್ದಾರೆ.

Advertisement

ನನ್ನೊಂದಿಗೆ ಜೆಡಿಎಸ್‌ನ ಇಬ್ಬರು ಶಾಸಕರು ನಿರಂತರ ಸಂಪರ್ಕದಲ್ಲಿದ್ದಾರೆ. ಯಾರು ಏನೇ ಮಾಡಿದರೂ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಆಗಲ್ಲ. ಕೆಳಗೆ ಇಳಿಸುತ್ತೇವೆ ಎನ್ನುವವರು ಭ್ರಮಾಲೋಕದಲ್ಲಿ ದ್ದಾರೆ ಎಂದರು. ನಾನು ಸಚಿವ ಸ್ಥಾನದ ಅಪೇಕ್ಷಿತನಲ್ಲ. ಆಡಳಿತ ಪಕ್ಷದ ಶಾಸಕ ಎಂಬುದೇ ನನಗೆ ಹೆಮ್ಮೆ ಇದೆ. ನಾನಾಗಿ ಏನನ್ನೂ ಕೇಳುವುದಿಲ್ಲ. ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ದೊಡ್ಡ ಮಹಿಳಾ ನಾಯಕಿ.

ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಅಥಣಿಯಲ್ಲೇ ಉತ್ತರ ಕೊಡುತ್ತೇನೆ. ಉಪಚುನಾವಣೆಯಲ್ಲಿ ಪ್ರಚಾರಕ್ಕೆ ನನ್ನನ್ನು ಎಲ್ಲಿಯೂ ನೇಮಿಸಲಿಲ್ಲ. ಆದರೆ, ಅಭ್ಯರ್ಥಿಗಳು ನನಗೆ ಫೋನ್‌ ಮಾಡಿ ಪ್ರಚಾರಕ್ಕೆ ಕರೆಯುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಕರೆದು ಚುನಾವಣೆ ಪ್ರಚಾರ ಮಾಡಲು ಸೂಚಿಸಿದ್ದಾರೆ. ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next