Advertisement

ಧಾವಂತ ಬೇಡ, ಎಲ್ಲ ಭಕ್ತರ ಅಂತಿಮ‌ ದರ್ಶನದ ಬಳಿಕವೇ ಶ್ರೀಗಳ ಅಂತ್ಯಸಂಸ್ಕಾರ: ಡಿಸಿ

02:56 PM Jan 03, 2023 | keerthan |

ವಿಜಯಪುರ: ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಮುಗಿಯುವವರೆಗೆ ಶ್ರೀಗಳ ಯಾತ್ರೆ ನಡೆಸುವುದಿಲ್ಲ. ಹೀಗಾಗಿ ಭಕ್ತರು ಧಾವಂತದಿಂದ ನೂಕು ನುಗ್ಗಲು ಮಾಡಬಾರದು‌ ಎಂದು ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವರ ಹೇಳಿದ್ದಾರೆ.

Advertisement

ಮಧ್ಯಾಹ್ನ 5 ರೊಳಗೆ ಭಕ್ತರ ದರ್ಶನ‌ ಮುಗಿಯಲಿದೆ ಎಂಬ ನಿರೀಕ್ಷೆಯಲ್ಲಿ ಸಮಯ ನಿಗದಿ ಮಾಡಿದ್ದೇವೆ. ಒಂದೊಮ್ಮೆ ಭಕ್ತರ ಸಂಖ್ಯೆ ಹೆಚ್ಚಳವಾದರೂ ದರ್ಶನದ ಅವಧಿಯನ್ನು ವಿಸ್ತರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:‌ಕನ್ನಡ ನಾಡು ನುಡಿಯ ಜಾಗೃತಿಗಾಗಿ ವೀರಣ್ಣ ಕುಂದರಗಿಮಠ ಅವರಿಂದ ಹ್ಯಾಂಡಲ್ ಇಲ್ಲದ ಬೈಕಿನಲ್ಲಿ ‌360 ಕಿ.ಮೀ ಸಂಚಾರ.!

ಹೀಗಾಗಿ ದೂರದ ಊರುಗಳಿಂದ ಬರುವ ಭಕ್ತರು ಆತುರ ಹಾಗೂ ಧಾವಂತ ಪಡುವ ಅಗತ್ಯವಿಲ್ಲ. ನೆರೆದ ಭಕ್ತರ ದರ್ಶನ ಪೂರ್ಣ ದರ್ಶನದ ಬಳಿಕವೇ ಅಂತ್ಯ ಸಂಸ್ಕಾರಕ್ಕಾಗಿ ಮೆರವಣಿಗೆ ನಡೆಸುತ್ತೇವೆ. ಅಗತ್ಯ ಬಿದ್ದಲ್ಲಿ ಬುಧವಾರದವರೆಗೂ ಅಂತಿಮ ದರ್ಶನದ ವ್ಯವಸ್ಥೆ ಮಾಡುತ್ತೇವೆ. ಹೀಗಾಗಿ ಭಕ್ತರು ಶ್ರೀಗಳ ದರ್ಶನದ ಅವಧಿ ಮುಗಿಯುತ್ತದೆ ಎಂಬ ಧಾವಂತ, ಆತುರ ತೋರಬಾರದೆಂದು ಭಕ್ತರಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next