Advertisement

ಈಶ್ವರಪ್ಪ ತಪ್ಪು ಮಾಡದಿದ್ದರೂ ರಾಜೀನಾಮೆ ನೀಡಬೇಕಾಯಿತು: ಯಡಿಯೂರಪ್ಪ

11:26 AM Apr 15, 2022 | Team Udayavani |

ಶಿವಮೊಗ್ಗ: ಯಾವುದೇ ತಪ್ಪು ಮಾಡದ ಈಶ್ವರಪ್ಪ ಅವರು ಅನಿವಾರ್ಯವಾಗಿ ರಾಜಿನಾಮೆ ನೀಡುವ ಪರಿಸ್ಥಿತಿ ಬಂದಿದೆ. ಎರಡು ಮೂರು ತಿಂಗಳಲ್ಲಿ ತನಿಖೆ ಪೂರ್ಣ ಮಾಡಿದರೆ ಈಶ್ವರಪ್ಪ ಅವರು ನಿರಪರಾಧಿ ಎಂಬುದು ತಿಳಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

Advertisement

ಶಿವಮೊಗ್ಗದ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಅವರು, ತನಿಖೆ ನಡೆದು ಆರೋಪದಿಂದ ಹೊರಬಂದರೆ ಈಶ್ವರಪ್ಪ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಈಶ್ವರಪ್ಪ ಸೇರಲು ಯಾವುದೇ ಅಡ್ಡಿ ಇರುವುದಿಲ್ಲ ಎಂದರು.

ಇದನ್ನೂ ಓದಿ:40% ಆರೋಪಿತರಿಗೆ ನಡುಕ: ಬೊಮ್ಮಾಯಿ ಸಂಪುಟದಲ್ಲಿ ಇನ್ನಷ್ಟು ತಲೆದಂಡ ?

ಅಪರಾಧ ಮಾಡದೇ ಇದ್ದರೂ ರಾಜೀನಾಮೆ ನೀಡಬೇಕಾಯಿತು. ಇದನ್ನು ಖಂಡಿತಾ ಈಶ್ವರಪ್ಪ ಎದುರಿಸಿ ಈ ಪ್ರಕರಣದಿಂದ ಹೊರಬಂದು ಮತ್ತೆ ಸಚಿವರಾಗಲಿದ್ದಾರೆ. ತನಿಖೆ ಮುಗಿದ ಬಳಿಕ ಈಶ್ವರಪ್ಪ‌ ಅವರು ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next