Advertisement

ಅಪಾಯಕಾರಿ ತ್ಯಾಜ್ಯ ವಿಲೇವಾರಿಗೆ ಬ್ರೇಕ್ ಹಾಕಲು  ‘ಇ- ಮ್ಯಾನಿಫೆಸ್ಟ್’  ಸೂತ್ರ.. ಏನಿದು?

06:46 PM Apr 01, 2021 | Team Udayavani |

ಬೆಂಗಳೂರು: ರಾಜ್ಯದ ಕೈಗಾರಿಕೆಗಳಲ್ಲಿ ಉತ್ಪತ್ತಿ ಆಗುವ ಅಪಾಯಕಾರಿ ತ್ಯಾಜ್ಯವನ್ನು ಕೈಗಾರಿಕೆಗಳು ಎಲ್ಲಿ ವಿಲೇವಾರಿ ಮಾಡುತ್ತಿವೆ ಮತ್ತು ಯಾರು ಇದರ ಮೇಲ್ವಿಚಾರಣೆ  ಮಾಡುತ್ತಾರೆ. ಎಲ್ಲಿಂದ -ಎಲ್ಲಿಗೆ ಅಪಾಯಕಾರಿ ತ್ಯಾಜ್ಯ ಸಾಗಾಣಿಕೆ ಆಗುತ್ತದೆ ಎನ್ನುವುದು ಸೇರಿದಂತೆ ಸಮಗ್ರ ಮಾಹಿತಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ದಾಖಲಿಸಲು ‘ಇ- ಮ್ಯಾನಿಫೆಸ್ಟ್’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

Advertisement

ರಾಜ್ಯದಲ್ಲಿ ಕೈಗಾರಿಕೆಗಳ ಅಪಾಯಕಾರಿ ತ್ಯಾಜ್ಯ ನಿರ್ವಹಣೆ   ಮಾಹಿತಿಯ ಬಗ್ಗೆ ಕೆಎಸ್‌ಪಿಸಿಬಿ ಇಲ್ಲಿಯವರೆಗೆ ಲಿಖಿತ ರೂಪದ ದಾಖಲೆ ಸಂಗ್ರಹಿಸುತ್ತಿತ್ತು. ಇದು ನಾಪತ್ತೆ ಆಗುವ ಮತ್ತು ಮಾಹಿತಿಯನ್ನು ತಿದ್ದುವ ಸಾಧ್ಯತೆಯೂ ಇತ್ತು. ಅಲ್ಲದೆ, ಇದರಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದರಲ್ಲೂ ಹಿನ್ನಡೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದ ಕೈಗಾರಿಕೆಗಳಲ್ಲಿ ಉತ್ಪತ್ತಿ ಆಗುವ ಅಪಾಯಕಾರಿ ತ್ಯಾಜ್ಯವನ್ನು ಕೆಎಸ್‌ಪಿಸಿಬಿಯ ಅಧಿಕೃತ ವೆಬ್‌ಸೈಟ್‌ನ ಇ-  ಮ್ಯಾನಿಫೆಸ್ಟ್ ನಲ್ಲಿ ಕಡ್ಡಾಯವಾಗಿ ದಾಖಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಅವರು ಆದೇಶ ಮಾಡಿದ್ದಾರೆ.

ಅಪಾಯಕಾರಿ ತ್ಯಾಜ್ಯ ವಿಲೇವಾರಿ -2016 ಅನ್ವಯ ಈ ಆದೇಶ ಮಾಡಲಾಗಿದ್ದು, ಒಮ್ಮೆ ಕೈಗಾರಿಕೆಗಳು ಕೆಎಸ್‌ಪಿಸಿಬಿಯ ಇ-  ಮ್ಯಾನಿಫೆಸ್ಟ್ ‌ನಲ್ಲಿ ಮಾಹಿತಿ ದಾಖಲಿಸಿದ ನಂತರ ಕೆಎಸ್‌ಪಿಸಿಬಿಯ ವಲಯ ಮಟ್ಟದ ಪರಿಸರ ಅಧಿಕಾರಿಗಳು ಮಾಹಿತಿ ಪರಿಶೀಲನೆ ಮಾಡಿ ಅನುಮೋದನೆ ನೀಡಲಿದ್ದಾರೆ. ಆಯಾ ಪ್ರದೇಶದಲ್ಲಿರುವ ಕೈಗಾರಿಕೆಗಳ ಮಾಹಿತಿ ದಾಖಲಿಸಲು ಕ್ರಮ ವಹಿಸುವಂತೆ ವಲಯ ಮಟ್ಟದ ಪರಿಸರ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ:ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಎನ್ ಎಸ್ ಎಸ್ ಘಟಕ ಕಡ್ಡಾಯ – ಡಾ. ನಾರಾಯಣಗೌಡ

ಈ ಪದ್ಧತಿ ಜಾರಿ ಮಾಡುವುದರಿಂದ ಅಪಾಯಕಾರಿ ತ್ಯಾಜ್ಯ ವಿಲೇವಾರಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಸಹಾಯವಾಗಲಿದೆ. ಅಪಾಯಕಾರಿ ತ್ಯಾಜ್ಯದ ವಿಲೇವಾರಿಯ ಬಗ್ಗೆ ಪೂರ್ಣ ಪ್ರಮಾಣದ ಮಾಹಿತಿ ಸಿಗಲಿದೆ ಎಂದು ಕೆಎಸ್‌ಪಿಸಿಬಿ ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next