Advertisement

ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮನೆಗೆ ನುಗ್ಗಿದ ಮಳೆ ನೀರು!

10:44 PM Jul 13, 2022 | Team Udayavani |

ಭೋಪಾಲ: ಭೋಪಾಲದ ಶ್ಯಾಮಲಾ ಹಿಲ್ಸ್‌ನಲ್ಲಿರುವ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾರವರಿಗೆ ನೀಡಲಾಗಿರುವ “ಬಿ 5′ ಎಂಬ ಬಂಗಲೆಯಲ್ಲಿ ಮಳೆ ನೀರು ನುಗ್ಗಿ, ಬಂಗಲೆಯ ನೆಲ ಅಂತಸ್ತಿನಲ್ಲಿದ್ದ ವಸ್ತುಗಳೆಲ್ಲವೂ ಮಳೆ ನೀರಿನಿಂದ ಹಾಳಾಗಿವೆ.

Advertisement

ಮಂಗಳವಾರ ರಾತ್ರಿಯಿಂದಲೇ ನೆಲ ಅಂತಸ್ತಿಗೆ ನೀರು ಬರಲಾರಂಭಿಸಿದೆ. ಬಂಗಲೆಯ ಸಿಬ್ಬಂದಿ ನೀರನ್ನು ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವಿಫ‌ಲವಾದವು. ಈ ನಿವಾಸವನ್ನು ಗುಡ್ಡದಲ್ಲಿ ಕಟ್ಟಲಾಗಿರುವುದರಿಂದ ಗುಡ್ಡದ ತುದಿಯ ಮೇಲೆ ಬಿದ್ದ ನೀರೆಲ್ಲವೂ ಈ ಮನೆಯೊಳಕ್ಕೆ ನುಗ್ಗಿದೆ. ಮನೆಯ ತುಂಬಾ ಕೆಲವು ಅಡಿಗಳವರೆಗೆ ನೀರು ನಿಂತಿದೆ. ಮೋಟಾರ್‌ಗಳನ್ನು ಬಳಸಿ ನೀರನ್ನು ಹೊರಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next