Advertisement

Ayodhya: ಜ.22ರಂದು ಅಯೋಧ್ಯೆಗೆ ಬರಬೇಡಿ: ಟ್ರಸ್ಟ್‌ ಕಾರ್ಯದರ್ಶಿ ಮನವಿ

12:33 AM Dec 17, 2023 | Team Udayavani |

ಹೊಸದಿಲ್ಲಿ: ಮುಂದಿನ ತಿಂಗಳ 22ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಆಗಲಿದೆ. ಆ ದಿನದಂದು ದೇಶವಾಸಿಗಳು ಅಯೋಧ್ಯೆಗೆ ಬರಬೇಡಿ ಎಂದು ರಾಮ ಮಂದಿರ ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರಾಯ್‌ ಮನವಿ ಮಾಡಿದ್ದಾರೆ. ದೇವಾಲಯ ಗರ್ಭಗುಡಿ ಹಾಗೂ ಮುಖ್ಯ ಸಭಾಂಗಣ ಸಿದ್ಧಗೊಂಡಿದೆ.

Advertisement

ಜ.22ರಂದು ಮಧ್ಯಾಹ್ನ 12 ಗಂಟೆಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ. ಅಂದು ಅಯೋಧ್ಯೆ ನಗರದಲ್ಲಿ ಭಾರೀ ಸಂಖ್ಯೆಯ ಜನದಟ್ಟಣೆ ಉಂಟಾಗಲಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ನಿಮ್ಮ ಊರಿನಲ್ಲಿಯೇ ಗುಡಿಯಲ್ಲಿ ಆನಂದ ಮಹೋತ್ಸವ ನಡೆಸಿ ಎಂದು ಕೋರಿದ್ದಾರೆ. ರಾಮ ಮಂದಿರದ ಉದ್ದೇಶಿತ ಕಾಮಗಾರಿಗಳು ಸಂಪೂರ್ಣವಾಗಲು ಇನ್ನೂ ಎರಡು ವರ್ಷಗಳು ಬೇಕು ಎಂದು ಚಂಪತ್‌ ರಾಯ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಜ.22ರಂದು ಪ್ರಾಣ ಪ್ರತಿಷ್ಠೆ ನಡೆಸಿಕೊಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next